ಮತ್ತೆ ಧಾರಾವಾಹಿಗೆ ಮರಳಿದ ವಿಜಯ್ ಸೂರ್ಯ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಹೊರಬಂದಿರುವ ವಿಜಯ್ ಸೂರ್ಯ ಈಗ ಮತ್ತೊಂದು ಸಿರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ.

ಇತ್ತೀಚೆಗಷ್ಟೆ ವಿಜಯ್ ಸೂರ್ಯ ಅವರು ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದಿದ್ದರು. ಆ ಧಾರಾವಾಯಿಯಿಂದ ಹೊರಬಂದ ಬೆನ್ನಲ್ಲೇ ವಿಜಯ್ ಮತ್ತೊಂದು ಸಿರಿಯಲ್ ನಲ್ಲಿ ಅಭಿನಯಿಸಲು ಸಹಿ ಹಾಕಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಕಸೌತಿ ಜಿಂದಗಿ ಕೀ’ ಧಾರಾವಾಹಿಯ ರಿಮೇಕ್‍ನಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಬೇರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ‘ಪ್ರೇಮಾಲೋಕ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಬಗ್ಗೆ ನಟ ವಿಜಯ್ ಸೂರ್ಯ ಕೂಡ ಅಧಿಕೃತ ಮಾಹಿತಿ ನೀಡಿದ್ದಾರೆ.

ನಾನು ಮುಂದಿನ ಧಾರಾವಾಹಿಯನ್ನು ಸೈನ್ ಮಾಡಿದ್ದೇನೆ. ನನಗೆ ಮೂರು ವಾಹಿನಿಯಿಂದ ಅವಕಾಶ ಬಂದಿತ್ತು. ಅದರಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ನನಗೆ ಈ ಧಾರಾವಾಹಿಯ ಕಾನ್ಸೆಪ್ಟ್ ಇಷ್ಟವಾಯಿತು. ಅಲ್ಲದೆ ಈ ಧಾರಾವಾಹಿ ಹಿಂದಿ ಹೆಚ್ಚು ಜನಪ್ರಿಯವಾಗಿದೆ. ನಾನು ಸೈನ್ ಮಾಡಿದ ನಂತರ ಕಸೌತಿ ಜಿಂದಗಿ ಕೀ ಧಾರಾವಾಹಿಯ 70 ಸಂಚಿಕೆಗಳನ್ನು ವೀಕ್ಷಿಸಿದ್ದೇನೆ. ಸದ್ಯ ಈ ಧಾರಾವಾಹಿಯಲ್ಲಿ ನನಗೆ ವಿಜಯ್ ಅಥವಾ ಸೂರ್ಯ ಹೆಸರಿಡಲು ಯೋಚಿಸುತ್ತಿದ್ದಾರೆ ಎಂದು ವಿಜಯ್ ಸೂರ್ಯ ತಿಳಿಸಿದ್ದಾರೆ.

ವಿಜಯ್ ಈಗಾಗಲೇ ನಟಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ. ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ.

Comments

Leave a Reply

Your email address will not be published. Required fields are marked *