ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.

ರೋಟರಿ ಸಂಸ್ಥೆಯಿಂದ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ರಕ್ತದಾನ ಶಿಬಿರವನ್ನು ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ವಿಜಯ ರಾಘವೇಂದ್ರ ಮಾಡಿದ್ದು, ತಾವೂ ಸಹ ರಕ್ತದಾನ ಮಾಡಲು ಮುಂದಾದರು.

ಈ ವೇಳೆ ಗಾಜನೂರಿನಲ್ಲಿ ಅಪ್ಪು ಅವರೊಡನೆ ಬಾಲ್ಯ ಕಳೆದ ನೆನಪನ್ನು ವಿಜಯ್ ಬಿಚ್ಚಿಟ್ಟರು. ಬೇರೆ ಯಾವುದರ ಬಗ್ಗೆಯು ತಲೆ ಕೆಡಿಸಿಕೊಳ್ಳೋದು ಬೇಡ, ಒಳ್ಳೆಯ ಕೆಲಸ ಮಾಡೋಣ ಎಂಬ ಪುನೀತ್ ಮಾತುಗಳನ್ನು ನೆನೆಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ಪ್ರಾಣ ಕಳೆದುಕೊಂಡ ರೈತರಿಗಾಗಿ ‘ಅಸ್ತಿ ಕಲಶ ರ‍್ಯಾಲಿ’ ಆಯೋಜನೆ: ನವಾಬ್ ಮಲಿಕ್

ಸದಾ ಒಳ್ಳೆಯ ಕೆಲಸಗಳ ಬಗ್ಗೆಯೇ ಚಿಂತಿಸುತ್ತಿದ್ದರು. ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ರಕ್ತದಾನ ಶಿಬಿರ ಉದ್ಘಾಟನೆ ಹಾಗು ರಕ್ತದಾನ ಮಾಡುವುದು ಸಾರ್ಥಕತೆ ಕೊಡುತ್ತೆ. ಪುನೀತ್ ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *