ನೇತ್ರಾವತಿ ನದಿಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ- ವಿಡಿಯೋ ವೈರಲ್

ಮಂಗಳೂರು: ಆಟೋ ಚಾಲಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

ಕಾಟಿಪಳ್ಳದ 35 ವರ್ಷದ ಮಹಮ್ಮದ್ ಬಶೀರ್ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ. ನದಿಗೆ ಬಿದ್ದ ಕೊನೆ ಕ್ಷಣದಲ್ಲಿ ನೀರಿನಲ್ಲಿ ವಿಲವಿಲ ಒದ್ದಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಘಟನೆ ಗುರುವಾರ ಸಂಜೆ ನಡೆದಿದ್ದು, ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಮಂಗಳೂರಿನ ಉಳ್ಳಾಲದ ಸೇತುವೆ ಮೇಲೆ ಆಟೋ ನಿಲ್ಲಿಸಿದ ಬಶೀರ್, ಅಲ್ಲಿಂದಲೇ ನದಿಗೆ ಹಾರಿದ್ದಾರೆ. ಕೂಡಲೇ ಸೇತುವೆ ಮೇಲೆ ಸೇರಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಬಶೀರ್ ನದಿಯಲ್ಲಿ ಮುಳುಗೇಳುತ್ತಾ ಸಾವಿನ ಕೊನೆಕ್ಷಣದಲ್ಲಿ ಒದ್ದಾಡುತ್ತಿರುವ ಕರುಣಾಜನಕ ದೃಶ್ಯ ಈಗ ವೈರಲ್ ಆಗಿದೆ.

https://www.youtube.com/watch?v=KxxEvUThRbE

Comments

Leave a Reply

Your email address will not be published. Required fields are marked *