ಅದಮ್ಯ ಚೇತನದ ಅಡುಗೆ ಮನೆಗೆ ಉಪರಾಷ್ಟ್ರಪತಿಗಳ ಭೇಟಿ

ಬೆಂಗಳೂರು: ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಸನ್ಮಾನ್ಯ ಉಪ ರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಮಂಗಳವಾರ ಭೇಟಿ ನೀಡಲಿದ್ದಾರೆ. ಗವಿಪುರಂ ಬಳಿ ಇರೋ ಗುಟ್ಟಹಳ್ಳಿಯಲ್ಲಿರುವ ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಲಿದ್ದು, ಹೇಗೆ ತ್ಯಾಜ್ಯದ ನಿರ್ವಹಣೆ ಮಾಡುತ್ತಿದ್ದಾರೆ ಅನ್ನೋದನ್ನ ಉಪರಾಷ್ಟ್ರಪತಿಗಳು ವೀಕ್ಷಣೆ ಮಾಡಲಿದ್ದಾರೆ.

ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ತಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ 1.50 ಲಕ್ಷ ಮಕ್ಕಳಿಗೆ ರುಚಿ, ಶುಚಿ, ಸ್ವಾದಿಷ್ಟಯುಕ್ತ ಮಧ್ಯಾಹ್ನದ ಬಿಸಿಯೂಟ ಸರಬರಾಜು ಕೆಲಸವನ್ನು ಅದಮ್ಯ ಚೇತನ ಸಂಸ್ಥೆ ಮಾಡುತ್ತಿದೆ. ಅದಮ್ಯ ಚೇತನ ಸಂಸ್ತೆಯನ್ನ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ 1997ರಲ್ಲಿ ಸ್ಥಾಪಿಸಿದರು. ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ವೀಕ್ಷಣೆಗೆ ಉಪರಾಷ್ಟ್ರಪತಿಗಳು ಆಗಮಿಸಲಿದ್ದಾರೆ.

ಅದಮ್ಯ ಚೇತನ ಸಮರ್ಥವಾಗಿ ಜೈವಿಕ ತ್ಯಾಜ್ಯವನ್ನು ಇಂಧನವನ್ನಾಗಿ ಬಳಸಿಕೊಂಡು ಫಾಸಿಲ್ ಇಂಧನವನ್ನು ಉಳಿತಾಯ ಮಾಡುತ್ತಿದೆ. ಪ್ರತಿದಿನವೂ 75 ಎಲ್‍ಪಿಜಿ ಸಿಲಿಂಡರ್ಗಳಷ್ಟು ಮತ್ತು 750 ಲೀಟರ್ ಡೀಸೆಲ್‍ನಷ್ಟು ಉಳಿತಾಯವಾಗುತ್ತಿದೆ. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಶೂನ್ಯ ತ್ಯಾಜ್ಯ ಅಡುಗೆ ಮನೆಯ ಮಾಹಿತಿಯನ್ನು ಉಪರಾಷ್ಟ್ರಪತಿಗಳಿಗೆ ನೀಡಲಿದ್ದಾರೆ.

Comments

Leave a Reply

Your email address will not be published. Required fields are marked *