ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ

ಉಡುಪಿ: ಗಲ್ಲು ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಅವಮಾನ ಮಾಡಿದ ಪಾಕ್ ಸರ್ಕಾರದ ವಿರುದ್ಧ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್ ಆಕ್ರೋಷ ವ್ಯಕ್ತ ಪಡಿಸಿದೆ.

ನಗರದ ಹುತಾತ್ಮ ಯುದ್ಧ ಸ್ಮಾಕರದ ಬಳಿ ಈ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿ ಪಾಕ್ ನಡೆಯನ್ನು ಖಂಡಿಸಿದರು. ಪ್ರತಿಭಟನೆಯ ವೇಳೆ ಪಾಕಿಸ್ತಾನ ಧ್ವಜದ ಮೇಲೆ ನಿಂತು ಬಳಿಕ ಧ್ವಜವನ್ನು ಸುಟ್ಟಿದ್ದಾರೆ.

ಭಜರಂಗದಳ ಸಂಚಾಲಕರ ಕೆ. ಆರ್ ಸುನೀಲ್ ಮಾತನಾಡಿ, ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳದ ಇಂದು ಇಡೀ ರಾಜ್ಯಾದ್ಯಂತ ಪಾಕಿಸ್ತಾನದ ಧ್ವಜವನ್ನು ಸುಡುವ ಮೂಲಕ ಆಕ್ರೋಷ ವ್ಯಕ್ತಪಡಿಸುತ್ತಿದೆ. ಮೂರು ದಿನಗಳ ಹಿಂದೆ ನಮ್ಮ ದೇಶದ ತಾಯಿ, ಅವರು ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಸುಮಾರು 22 ತಿಂಗಳಿನಿಂದ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಹೋದಾಗ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.

ಪಾಕಿಸ್ತಾನ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದ್ದು, ಈ ದೇಶದ ಪವಿತ್ರವಾಗಿರುವಂತಹ ತಾಳಿ ಮತ್ತು ಬಳೆಗಳನ್ನು ತೆಗೆಸಿ ಭೇಟಿ ಮಾಡಿಸಿದೆ. ಅಷ್ಟೇ ಅಲ್ಲದೇ ಅವರ ಪಾದರಕ್ಷೆಯಲ್ಲಿ ಚಿಪ್ ಇರಬಹುದು ಎಂದು ಅದನ್ನು ತೆಗೆಸಿದ್ದಾರೆ. ಇದು ಪಾಕ್ ಸರ್ಕಾರದಿಂದ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ. ಇಡೀ ಪ್ರಪಂಚಕ್ಕೆ ಪಾಕಿಸ್ತಾನ ತಲೆನೋವು ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಸೇನೆಗೆ ಪಾಪಿ ಪಾಕಿಸ್ತಾನವನ್ನು ಇಡೀ ಜಗತ್ತಿನ ನಕ್ಷೆಯಲ್ಲಿ ಇಲ್ಲದಂತೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು. ಇದನ್ನು ಓದಿ: ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಜಾಧವ್ ಭೇಟಿ ಮಾಡಿದ ಪತ್ನಿ, ತಾಯಿ  ಇದನ್ನು ಓದಿ: ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

Comments

Leave a Reply

Your email address will not be published. Required fields are marked *