ತರಕಾರಿ ಲಾರಿ ಪಲ್ಟಿ- ಪವಾಡಸದೃಶವಾಗಿ ಚಾಲಕ, ಕ್ಲೀನರ್ ಪಾರು

ಉಡುಪಿ: ಶಿವಮೊಗ್ಗದಿಂದ ತರಕಾರಿ ತುಂಬಿಸಿಕೊಂಡು ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಕಾರಿಗೆ ಸೈಡ್ ನೀಡುವ ಭರದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಾಪು ಸಮೀಪದ ದಂಡತೀರ್ಥ ಶಾಲೆಯ ಮುಂಭಾಗ ಈ ಘಟನೆ ನಡೆದಿದೆ. ಪಲ್ಟಿಯಾದ ರಭಸಕ್ಕೆ ಲಾರಿ ವಿದ್ಯುತ್ ಕಂಬಗಳಿಗೆ ಗುದ್ದಿದೆ. ಒಂದು ಕಂಬ ತುಂಡಾಗಿದ್ದು, ಲಾರಿ ಚಾಲಕ ಸದ್ದಾಂ ಮತ್ತು ಕ್ಲೀನರ್ ಮಧು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ವಿದ್ಯುತ್ ಕಂಬದಿಂದ ಲಾರಿ ದೂರ ಬಿದ್ದ ಕಾರಣ ಅವಘಡ ತಪ್ಪಿದೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *