ವೈಕುಂಠ ಏಕಾದಶಿಗೆ ಯಲಹಂಕದಲ್ಲಿ 2 ಲಕ್ಷ ಲಾಡು ತಯಾರು

– 27 ವರ್ಷದಿಂದ ಸತತ ಲಾಡು ತಯಾರಿಕೆ

ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಯಲಹಂಕದಲ್ಲಿ 2 ಲಕ್ಷ ಲಾಡುಗಳನ್ನು ತಯಾರು ಮಾಡಲಾಗಿದ್ದು, ಬೆಂಗಳೂರಿನ ಅನೇಕ ದೇವಾಲಯಗಳಿಗೆ ತಲುಪಿಸು ಸಿದ್ಧತೆ ನಡೆದಿದೆ.

ಅರ್ನ ಸೇವಾ ಟ್ರಸ್ಟ್ ವತಿಯಿಂದ ಕೇಶವ ರಾಜಣ್ಣ ನೇತೃತ್ವದಲ್ಲಿ ಲಾಡುಗಳನ್ನ ತಯಾರು ಮಾಡಲಾಗಿದೆ. ಬೆಂಗಳೂರಿನ ಕೆಲವು ದೇವಾಲಯಗಳಿಗೆ ಇವರೇ ಹೋಗಿ ದೇವಾಲಯದಲ್ಲಿ ಹಂಚಿ ಬರುತ್ತಾರೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ವೆಂಕಟೇಶ್ವರ ದೇವಾಲಯದ ಯಾರೇ ಕರೆ ಮಾಡಿ ಲಾಡು ಬೇಕು ಅಂದ್ರು ಅವರಿಗೆ ತಲುಪಿಸುವ ಕೆಲಸವನ್ನ ಮಾಡಲಾಗುತ್ತಿದೆ.

ದೇವಾಲಯದ ಯಾರಾದರೂ ಕಾಲ್ ಮಾಡಿ ದೇವಾಲಯದ ವಿಳಾಸ ಹೇಳಿದರೆ ಅರ್ನ ಸೇವಾ ಟ್ರಸ್ಟ್ ನವರೇ ಕಳುಹಿಸಿಕೊಡುತ್ತಾರೆ. ಇಲ್ಲವೇ ದೇವಾಲಯದವರೇ ಬಂದು ಲಾಡುಗಳನ್ನು ತೆಗೆದುಕೊಂಡು ಹೋಗಬಹುದು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರ್ನ ಸೇವಾ ಟ್ರಸ್ಟ್ ಸದಸ್ಯರೊಬ್ಬರು, ಎಲ್ಲಾ ಲಾಡುಗಳನ್ನ ಹಲವು ವರ್ಷಗಳಿಂದ ಉಚಿತವಾಗಿ ವಿತರಣೆ ಮಾಡುತ್ತಲೇ ಬಂದಿದ್ದೇವೆ. ಈ ಬಾರಿ ಚಿತ್ರನಟಿ ಸುಧಾರಾಣಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ ಯಲಹಂಕ ಉಪನಗರದ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘದ ಮೈದಾನದ ಆವರಣದಲ್ಲಿ ನಡೆಯಲಿದೆ. ಯಾರಿಗೆ ಲಾಡುಗಳು ಬೇಕೋ ಅವರು ಒಂದು ಕರೆ ಲಾಡುಗಳನ್ನ ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *