ಪ್ರಕರಣದ ಮಾಹಿತಿ ಕಲೆಹಾಕಲು ಹೋಗಿದ್ದ ಕಾರವಾರದ ಡಿವೈಎಸ್‍ಪಿ ನಾಪತ್ತೆ

ಕಾರವಾರ: ಪ್ರಕರಣದ ಮಾಹಿತಿ ಕಲೆಹಾಕಲು ಹೋಗಿದ್ದ ಕಾರವಾರದ ಡಿವೈಎಸ್‍ಪಿ ಶಂಕರ್ ಮಾರಿಯಾಳ್ ಹಾಗೂ ಕೆಲ ಪೊಲೀಸ್ ಅಧಿಕಾರಿಗಳು ಕಾಳಿ ನದಿ ಕಾಡಿನಲ್ಲಿ ನಾಪತ್ತೆಯಾಗಿದ್ದಾರೆ.

ವಿಶೇಷ ತನಿಖೆ ಸಂಬಂಧ ತಮ್ಮ ಸಿಬ್ಬಂದಿಯೊಂದಿಗೆ ಶಂಕರ್ ಮಾರಿಯಾಳ್ ಹಾಗೂ ಪೊಲೀಸ್ ಅಧಿಕಾರಿಗಳ ತಂಡವು ವಾಹನದಲ್ಲಿ ಬಾರೆ ಗ್ರಾಮದ ಅರಣ್ಯ ಪ್ರದೇಶದಕ್ಕೆ ತೆರಳಿತ್ತು. ಈ ವೇಳೆ ಕಾಡಿನಲ್ಲಿ ತಂಡ ಬೇರ್ಪಟ್ಟು ಶಂಕರ್ ಮಾರಿಯಾಳ್ ಹಾಗೂ ಪೊಲೀಸ್ ಅಧಿಕಾರಿಗಳು ಕಾಣೆಯಾಗಿದ್ದಾರೆ. ಮೊಬೈಲ್, ವಾಕಿಟಾಕಿ ಸಿಗ್ನಲ್ ಸಿಗದ ಕಾರಣ ಮಲ್ಲಾಪುರ ಹಾಗೂ ಕದ್ರದ ಪೊಲೀಸರು ಕೂಂಬಿಂಗ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.

ಡಿವೈಎಸ್‍ಪಿ ಹಾಗೂ ಪೊಲೀಸ್ ಅಧಿಕಾರಿಗಳು ಯಾವ ಪ್ರಕರಣದ ಸಂಬಂಧ ಕಾಡಿನ ಭಾಗಕ್ಕೆ ತೆರಳಿದ್ದರು ಎಂಬುದು ತಿಳಿದು ಬಂದಿಲ್ಲ. ಆದರೆ ಪೊಲೀಸ್ ಅಧಿಕಾರ ನಾಪತ್ತೆಯಿಂದ ಕುಟುಂಬಸ್ಥರು ಹಾಗೂ ಹಿರಿಯ ಅಧಿಕಾರಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *