ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರುದೂರ ಹೊತ್ತೊಯ್ದು ಬಿಟ್ರು

ಕಾರವಾರ: ನಿಯಮವನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಹೋಮ್ ಗಾರ್ಡಿಗೆ ಪ್ರವಾಸಿಗರು ಕಾರಿನಿಂದ ಡಿಕ್ಕಿ ಹೊಡೆದು, ಮಾರುದೂರ ಹೊತ್ತೊಯ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಚಿದಾನಂದ್ ಅಪಘಾತದಲ್ಲಿ ಗಾಯಗೊಂಡ ಹೋಮ್ ಗಾರ್ಡ್. ಕುಮಟಾ ತಾಲೂಕಿನ ಗೋಕರ್ಣದ ಕಡಲತೀರದ ರಸ್ತೆಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರವಾಸಿಗರ ಕಾರು ಗೋಕರ್ಣದ ಕಡಲತೀರದ ಸಮೀಪದ ಒನ್ ವೇಯಲ್ಲಿ ಬರುತ್ತಿತ್ತು. ಅದನ್ನು ನೋಡಿದ ಚಿದಾನಂದ್ ಕಾರನ್ನು ತಡೆಯಲು ಮುಂದಾಗಿದ್ದರು. ಆದರೆ ಚಾಲಕ ಕಾರು ನಿಲ್ಲಿಸದೇ ಚಿದಾನಂದ್ ಅವರಿಗೆ ಡಿಕ್ಕಿ ಹೊಡೆದು, ಸ್ವಲ್ಪ ದೂರದವರೆಗೆ ಹೊತ್ತೊಯ್ದು ಬಿಟ್ಟಿದ್ದಾನೆ. ಅದೃಷ್ಟವಶಾತ್ ಚಿದಾನಂದ್ ಅವರಿಗೆ ಸಣ್ಣಪಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದುರಾದೃಷ್ಟವಶಾತ್ ಘಟನೆ ಸಂಬಂಧ ಪ್ರಕರಣ ಸಹ ದಾಖಲಾಗಿಲ್ಲ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *