ಕೋಲಾರ: ಯುಪಿಎಸ್ಸಿ ಟಾಪರ್ ಆಗಿ ಕೆ.ಆರ್.ನಂದಿನಿ ಅವರು ಹೊರಹೊಮ್ಮಿದ ಬಳಿಕ ಕೋಲಾರದ ಮುನೇಶ್ವರ ನಗರಕ್ಕೆ ಕಾಯಕಲ್ಪ ಸಿಕ್ಕಿದೆ.
ಹೌದು. ದೇಶಕ್ಕೆ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದ ನಂದಿನಿ ಅವರ ಫಲಿತಾಂಶದಿಂದಾಗಿ ತಂದೆ ತಾಯಿ ವಾಸವಿರುವ, ತಾವು ಹುಟ್ಟಿ ಬೆಳೆದ ವಠಾರದ ಚಿತ್ರಣ ಈಗ ಬದಲಾಗುತ್ತಿದೆ.
ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ. ನಗರಕ್ಕೆ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಗಳನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.
ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಬದಲಾವಣೆಯಾಗದ ವ್ಯವಸ್ಥೆ ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ ಎಂದು ಮುನೇಶ್ವರ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
https://www.youtube.com/watch?v=uGLO7ROjcVg





Leave a Reply