ಕಸದ ರಾಶಿಯಲ್ಲಿ ಯುಪಿಎಸ್ ಬ್ಯಾಟರಿ ಸ್ಫೋಟಕ್ಕೆ ಕಂದಕ ನಿರ್ಮಾಣ

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬಳಿ ಕಸದ ರಾಶಿಯಲ್ಲಿ ಯುಪಿಎಸ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಆ ಪ್ರದೇಶದಲ್ಲಿ ಕಂದಕ ನಿರ್ಮಾಣವಾಗಿದೆ.

ಸೋಮವಾರ ಸಂಜೆ ವೇಳೆ ಗ್ರಾಮದ ಸರ್ಕಾರಿ ಜಾಗದಲ್ಲಿ ಶೇಖರಣೆಯಾಗುತ್ತಿದ್ದ ಕಸದ ರಾಶಿಯಿಂದ ಯುಪಿಎಸ್ ಬ್ಯಾಟರಿ ಸ್ಫೋಟಗೊಂಡಿತ್ತು. ಕಸದ ರಾಶಿಯಲ್ಲಾದ ಸ್ಫೋಟದ ತೀವ್ರತೆಗೆ ಭೂಮಿಯಲ್ಲಿ ಸಮಾರು 2 ಅಡಿ ಆಳಕ್ಕೆ ಕಂದಕ ನಿರ್ಮಾಣವಾಗಿದೆ.

ಈ ನಿಗೂಢ ಸದ್ದು ಎಲ್ಲಿದ ಬಂತು? ಏನು ಸ್ಫೋಟವಾಗಿದೆ ಎಂದು ಅರಿಯದ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಬರೋಬ್ಬರಿ ನಾಲ್ಕು ಕಿ.ಮೀ ವರೆಗೂ ಹಬ್ಬಿದ ಸ್ಫೋಟ ಸದ್ದಿಗೆ ಬೆಟ್ಟದಪುರ ಗ್ರಾಮಸ್ಥರು ಭಯಗೊಂಡಿದ್ದರು.

ಸ್ಪೋಟದ ಸದ್ದು ಕೇಳಿದ ಕೂಡಲೇ ಗ್ರಾಮಸ್ಥರು ಬೆಟ್ಟದಪುರ ಪೊಲೀಸರಿಗೆ ಸ್ಥಳಿಯರು ವಿಷಯ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಸದ ರಾಶಿಯಲ್ಲಿ ಸ್ಫೋಟಗೊಂಡಿದ್ದು ಯುಪಿಎಸ್ ಬ್ಯಾಟರಿ ಎಂದು ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *