ಪ್ರಜಾಕೀಯ, ರಾಜಕೀಯದ ವ್ಯತ್ಯಾಸ ತಿಳಿಸಿದ ಉಪೇಂದ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇಂದು ಟ್ವೀಟ್ ಮಾಡಿರುವ ಉಪೇಂದ್ರ ಪ್ರಜಾಕೀಯ ಮತ್ತು ರಾಜಕೀಯ ಮನಸ್ಥತಿಯ ವ್ಯತ್ಯಾಸವನ್ನು ಬಿಚ್ಚಿಡುವ ಮೂಲಕ ತಮ್ಮ ವಿಭಿನ್ನ ಯೋಚನೆಗಳನ್ನು ಮತದಾರರ ಮುಂದಿಟ್ಟಿದ್ದಾರೆ.

ಗೆಲ್ಲುವ ನಾಯಕರೇ ಬೇಕೆಂದು ಕೇಳುವುದು ರಾಜಕೀಯ ಮನಸ್ಥಿತಿ. ವಿಚಾರವಂತ ಕಾರ್ಮಿಕರು ಬೇಕೆಂದು ಕೇಳುವುದು ಪ್ರಜಾಕೀಯದ ಮನಸ್ಥಿತಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಉಪೇಂದ್ರ ಪ್ರತಿನಿತ್ಯ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಉಪೇಂದ್ರರ ಕೆಲವು ಟ್ವೀಟ್‍ಗಳನ್ನು ಈ ಕೆಳಗೆ ನೀಡಲಾಗಿದೆ.
1. ಪ್ರಜಾಕೀಯದ ಪ್ರಚಾರ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ.
2. ಚುನಾವಣೆ ಒಂದು ಯುದ್ಧರಂಗ ಎಂಬ ವಿಜೃಂಭಣೆ. ಒಬ್ಬರನ್ನೊಬ್ಬರು ಬೈಯುವುದು, ಆಪಾದನೆ, ಕೆಸರೆರಚಾಟ ಪ್ರಜೆಗಳಿಗೆ ಬೇಕಿಲ್ಲ. ಪ್ರಜೆಗಳಿಗೆ ಬೇಕಿರುವುದು ಅಭ್ಯರ್ಥಿಗಳು ಇನ್ನು ಮುಂದೆ ಐದು ವರ್ಷ ಹೇಗೆ ಕೆಲಸ ಮಾಡುತ್ತಾರೆ ಎಂಬ ವಿವರ.
3. ನಿಮ್ಮ ಹಣದಿಂದ ನಿಮ್ಮ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಭ್ರಷ್ಟಾಚಾರವಿಲ್ಲದೆ ಪಾರದರ್ಶಕತೆಯಿಂದ ನಿಮ್ಮ ಸಂಪರ್ಕದಲ್ಲಿದ್ದು ಮಾಡುತ್ತೇವೆ ಎನ್ನುವ ವಿಚಾರಗಳಿಗೆ ಮಾತ್ರ ನಿಮ್ಮ ಮತವಿರಲಿ. ಖ್ಯಾತಿ, ವರ್ಚಸ್ಸು, ಹಣ ಖರ್ಚು ಮಾಡಿ ಪ್ರಚಾರ ಮಾಡಿ ಬರೀ ಆಶ್ವಾಸನೆಗಳನ್ನು ನೀಡುವವರಿಗಲ್ಲ.

4. ಇಂದಿನ ರಾಜಕೀಯ ಚುನಾವಣಾ ಪ್ರಕ್ರಿಯೆ 20% ಫ್ರಭಾವೀ ಜನ, 80% ಜನಸಾಮಾನ್ಯರ. ಪರೋಕ್ಷ ತೆರಿಗೆ ಹಣ ಅನುಭವಿಸುತ್ತಿದ್ದಾರೆ. ಮತ್ತು ಅದೇ ಹಣದಿಂದ ಫ್ರಭಾವ ಬೀರುತ್ತಿದ್ದಾರೆ.
5. ಆಡಳಿತ ಸರ್ಕಾರದ ಒಳ್ಳೆ ಕೆಲಸ ಜನಕ್ಕೆ ತಲುಪಿದ್ದರೆ ಮತ್ತೆ ಜನರನ್ನ ತಲುಪೋಕೆ ಪ್ರಚಾರ ಬೇಕಾ? ವಿರೋಧ ಪಕ್ಷ, 5 ವರ್ಷ ಆಡಳಿತ ಪಕ್ಷದ ತಪ್ಪು ಒಪ್ಪುಗಳನ್ನ ಜನರಿಗೆ ತಲುಪಿಸಿದ್ದರೆ ಈಗ ಅವರಿಗೆ ಜನರನ್ನು ತಲುಪಲು ಪ್ರಚಾರ ಬೇಕಾ? ಬೇಕಿರುವುದು ಪ್ರಚಾರವಲ್ಲ ಪಾರದರ್ಶಕತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *