ಶಾಲೆಯ ಗೋಡೆ ಮೇಲೆ ಅಶ್ಲೀಲ ಪದ- ಮುಜುಗರಕ್ಕೀಡಾದ ವಿದ್ಯಾರ್ಥಿ, ಶಿಕ್ಷಕ ವೃಂದ

ಹಾಸನ: ಶಾಲೆಯ ಗೋಡೆಗಳ ಮೇಲೆ ಶಿಕ್ಷಕರ ವಿರುದ್ಧವೇ ಬರಹಗಳನ್ನು ಬರೆದಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹುರುಡಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾ ದೇಗುಲದಲ್ಲಿ ಅಶ್ಲೀಲ ಶಬ್ಧಗಳ ಬರಹ ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಮಸ್ಥರು ಮುಜುಗರಕ್ಕೆ ಈಡಾಗುವಂತಾಗಿದೆ.

ಪ್ರೌಢ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳು ಸಹ ಅಶ್ಲೀಲ ಬರಹಗಳಿಂದ ಪೋಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ಶಾಲೆಯ ಇಬ್ಬರು ಶಿಕ್ಷಕರ ನಡುವೆಯ ಕಲಹವಿದ್ದು ಈ ಗೋಡೆ ಬರಹಕ್ಕೆ ಅವರೇ ಕಾರಣ ಎಂದು ಹೇಳಲಾಗಿದೆ.

ಎರಡು ವರ್ಷಗಳಿಂದ ಶಿಕ್ಷಕರ ನಡುವೆಯ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *