ಸ್ಕೂಲ್ ಮೆಟ್ಟಿಲು, ಕಾಂಪೌಂಡ್, ರಸ್ತೆಯಲ್ಲೆಲ್ಲಾ Sorry- ವ್ಯಕ್ತಿಗಾಗಿ ಪೊಲೀಸರು ಹುಡುಕಾಟ

ಬೆಂಗಳೂರು: ಸಿಲಿಕಾನ್ ಸಿಟಿಯ ಶಾಲೆಯೊಂದರ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ Sorry ಎಂದು ಬರೆಯಲಾಗಿದ್ದು, ಇದೀಗ ಪೊಲೀಸರು ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಹೌದು, ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿಯಲ್ಲಿ ಹುಚ್ಚಾಟ ಮೆರೆಯಲಾಗಿದೆ. ಅದ್ಯಾವ ಪುಣ್ಯಾತ್ಮ ಈ ಕೆಲಸ ಮಾಡಿದ್ದಾನೋ ಗೊತ್ತಿಲ್ಲ. ಸ್ಕೂಲ್ ನ ಕಾಂಪೌಂಡ್, ರಸ್ತೆ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ. ಇದನ್ನೂ ಓದಿ: ಬೆಳಗಾವಿಯ ಮಿಡಕನಟ್ಟಿಯಲ್ಲಿ 2.58 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶಕ್ಕೆ

ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಯಾರು ಮತ್ತು ಯಾಕೆ ಈ ರೀತಿ Sorry ಕೇಳಿರುವುದು ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇತ್ತ ಪೊಲೀಸರು ಕೂಡ Sorry ಬರೆದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಫೀಲ್ಡ್ ಗಿಳಿದಿದ್ದಾರೆ.

ಒಟ್ಟನಲ್ಲಿ ಇದೀಗ ರಸ್ತೆ, ಕಾಂಪೌಂಡ್ ಹಾಗೂ ಕಾಲೇಜ್ ಬಳಿ Sorry ಕೇಳಿದವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Comments

Leave a Reply

Your email address will not be published. Required fields are marked *