ಪೇಜಾವರ ಸ್ವಾಮೀಜಿ ವೈದ್ಯಕೀಯ ನೆರವಿಗೆ ಸಿದ್ಧ- ಆರೋಗ್ಯ ಸಚಿವ ಡಾ. ಹರ್ಷವರ್ಧನ್

ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಕೇಂದ್ರ ಆರೋಗ್ಯ ಸಚಿವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಕೆಎಂಸಿ ವೈದ್ಯಕೀಯ ಅಧೀಕ್ಷಕರಿಗೆ ಕರೆ ಮಾಡಿ ಮಾತನಾಡಿರುವ ಸಚಿವ ಡಾ. ಹರ್ಷವರ್ಧನ್ ಸ್ವಾಮೀಜಿಗಳ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಡಾ. ಅವಿನಾಶ್ ಅವರಲ್ಲಿ ಸ್ವಾಮೀಜಿಗೆ ಇರುವ ಸಮಸ್ಯೆ ಮತ್ತು ಚಿಕಿತ್ಸೆ ಕುರಿತಾದ ಮಾಹಿತಿ ಪಡೆದುಕೊಂಡರು.

ಅಗತ್ಯ ಬಿದ್ದರೆ ವೈದ್ಯಕೀಯ ನೆರವು ಕೊಡುತ್ತೇವೆ. ಕೇಂದ್ರ ಸರಕಾರದ ಆರೋಗ್ಯ ಇಲಾಖೆಯನ್ನು ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಪೇಜಾವರ ಮಠದ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಮಠದ ಆಪ್ತ ವಾಸುದೇವ ಭಟ್ ಮಾತನಾಡಿ, ಸಚಿವರು ಕೆಎಂಸಿ ವೈದ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಪೇಜಾವರಶ್ರೀ ಆಪ್ತ ಕಾರ್ಯದರ್ಶಿಗಳನ್ನು ಕೂಡ ಸಂಪರ್ಕಿಸಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *