ಮತ್ತೆ ಮಾಧ್ಯಮಗಳ ಮೇಲೆ ಕಿಡಿಕಾರಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಕಾರವಾರ: ಕೆಲವು ಮಾಧ್ಯಮಗಳು ಬೇಡದ ಪ್ರಚಾರ ಮಾಡುತ್ತಿವೆ. ನೀವು ಏನು ಬೇಕಾದರೂ ಬರೆದುಕೊಳ್ಳಿ. ಏನು ಬೇಕಾದರೂ ಹಾಕಿಕೊಳ್ಳಿ.ಅದರಿಂದ ನನಗೇನೂ ತೊಂದರೆಯಿಲ್ಲ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ  ಮತ್ತೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಹೊನ್ನಾವರ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ತಮ್ಮ ಹೇಳಿಕೆಯನ್ನ ಮತ್ತೊಮ್ಮೆ ಸಮರ್ಥಿಸಿಕೊಂಡ ಅವರು, ವಾರಗಟ್ಟಲೇ ಸುದ್ದಿ ಮಾಡಿ ನನಗೆ ಅಪಪ್ರಚಾರ, ಪ್ರಚಾರವೇ ಮಾಡಲಿ. ಎಲ್ಲವನ್ನ ನುಂಗಿ ನೀರು ಕುಡಿಯುವ ಶಕ್ತಿ ನನಗಿದೆ ಎಂದು ಹೇಳಿದರು.

ಸೋಮವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಮಿತ್ರರರು ಹೊರತು ಪಡಿಸಿ ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

https://youtu.be/j3pQfXA7x5c

https://youtu.be/70m67nYmDvQ

Comments

Leave a Reply

Your email address will not be published. Required fields are marked *