ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಹೋದರಿಯ ಮುಂದೆಯೇ ಪತಿಯನ್ನು ಕೊಂದ!

ಮುಂಬೈ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಯುವತಿಯ ಸಹೋದರ ಆಕೆಯ ಎದುರಲ್ಲೇ ಭಾವನನ್ನು ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸುಮಿತ್ ಶಿವರಾಜ್ ವಾಗ್ರೆ (25) ಕೊಲೆಯಾದ ಯುವಕ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸುಮಿತ್ ಶಿವರಾಜ್ ವಾಗ್ರೆ ಪತ್ನಿ ಭಾಗ್ಯಶ್ರೀರೊಂದಿಗೆ ಕಾಲೇಜಿನಿಂದ ಹೊರ ಬಂದ ವೇಳೆ ಘಟನೆ ನಡೆದಿದೆ.

ಭಾಗ್ಯಶ್ರೀ ಸಹೋದರ ಬಾಲಾಜಿಗೆ ತನ್ನ ಸಹೋದರಿಯನ್ನು ಶಿವರಾಜ್ ವಾಗ್ರೆ ಮದುವೆಯಾಗಿದ್ದು ಇಷ್ಟವಿರಲಿಲ್ಲ. ಇದರಿಂದ ತನ್ನ ಸ್ನೇಹಿತರೊಂದಿಗೆ ಆಗಮಿಸಿದ ಆತ ಕಾಲೇಜಿನಿಂದ ಹಿಂದಿರುಗುತ್ತಿದ್ದ ವೇಳೆ ದಾಳಿ ನಡೆಸಿ ಹಲ್ಲೆ ನಡೆಸಿದ್ದ. ಸಹೋದರನಿಂದ ಹಲ್ಲೆಗೊಳಗಾಗಿದ್ದ ಪತಿಯನ್ನು ರಕ್ಷಿಸಿ ಕೊಳ್ಳಲು ಮುಂದಾದ ಭಾಗ್ಯಶ್ರೀ ಸ್ಥಳೀಯ ವ್ಯಕ್ತಿಯ ನೆರವು ಪಡೆದು ಶಿವರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಹೆಚ್ಚಿನ ರಕ್ತಸ್ರಾವ ಆದ ಕಾರಣ ಸಮಿತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಕಾಲೇಜಿನಲ್ಲಿ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿದ್ದ ಸುಮಿತ್ ಶಿವರಾಜ್ ವಾಗ್ರೆ ಜೋಡಿ ಬಳಿಕ ಪ್ರತ್ಯೇಕವಾಗಿ ವಾಸವಾಗಿದ್ರು, ಬುಧವಾರ ಪರೀಕ್ಷೆ ಇದ್ದ ಕಾಲೇಜಿಗೆ ಆಗಮಿಸಿದ್ದರು. ಆದರೆ ಭಾಗ್ಯಶ್ರೀ ಸಹೋದರ ಮಾತ್ರ ಸುಮಿತ್ ಮೇಲಿನ ದ್ವೇಷಕ್ಕೆ ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರ ಪೊಲೀಸರು ಆರೋಪಿ ಬಾಲಾಜಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *