ಹತ್ಯೆ ತನಿಖೆ ಬಗ್ಗೆ ಅಸಮಾಧಾನ – ದೇಶ ತೊರೆಯುವುದಾಗಿ ಸಿಧು ಮೂಸೆವಾಲಾ ತಂದೆ ಹೇಳಿಕೆ

ಚಂಡೀಗಢ: ಶೂಟೌಟ್‌ಗೆ ಬಲಿಯಾಗಿದ್ದ ಪಂಜಾಬ್‌ನ ಖ್ಯಾತ ಗಾಯಕ (Punjabi Singer) ಸಿಧು ಮೂಸೆವಾಲಾ (Sidhu Moosewala) ಅವರ ತಂದೆ ಬಲ್ಕೌರ್ ಸಿಂಗ್ (Balkaur Singh) ಹತ್ಯೆಯ ತನಿಖೆಯ ಬಗ್ಗೆ ಭಾನುವಾರ ಅಸಮಾಧಾನ ಹೊರಹಾಕಿದ್ದಾರೆ. ಇದು ಯೋಜಿತ ಕೊಲೆ. ಆದರೆ ಗ್ಯಾಂಗ್ ವಾರ್ ಎಂದು ತೋರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದು, ತಾವು ದೇಶ ತೊರೆಯುವುದಾಗಿ ಹೇಳಿದ್ದಾರೆ.

ನನ್ನ ಮಗನನ್ನು ಯೋಜಿತ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಪೊಲೀಸರು ಇದನ್ನು ಗ್ಯಾಂಗ್ ವಾರ್ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಸಮಸ್ಯೆಯನ್ನು ಆಲಿಸಲು ಡಿಜಿಪಿ ಬಳಿ ಸಮಯ ಕೇಳಿದ್ದೇನೆ. ಕೊಲೆಯ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತದೆಯೇ ಎಂಬುದನ್ನು ನಾನು 1 ತಿಂಗಳು ಕಾದು ನೋಡುತ್ತೇನೆ. ಅಲ್ಲಿಯವರೆಗೆ ಯಾವ ಪರಿಹಾರವೂ ಸಿಕ್ಕಿಲ್ಲ ಎಂದಾದರೆ, ಎಫ್‌ಐಆರ್ ಅನ್ನು ಹಿಂತೆಗೆದುಕೊಂಡು ದೇಶವನ್ನೇ ತೊರೆಯುತ್ತೇನೆ ಎಂದು ಬಲ್ಕೌರ್ ಸಿಂಗ್ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಮತ್ತೆ 40% ಸದ್ದು- ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಎಎಪಿ ಸರ್ಕಾರ ರದ್ದು ಮಾಡಿದ 1 ದಿನದ ಬಳಿಕ ಈ ವರ್ಷ ಮೇ 29 ರಂದು ಅವರ ಹತ್ಯೆ ನಡೆದಿತ್ತು. ಕೆಲ ಕಿಡಿಗೇಡಿಗಳು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಹಾಗೂ ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಹಾಗೂ ಅವನ ಕೆಲ ಸಹಚರರನ್ನು ಬಂಧಿಸಿದ್ದರು. ಇದನ್ನೂ ಓದಿ: ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *