ಉತ್ಸವ-ಉರೂಸ್‍ನಲ್ಲಿ ಹಿಂದೂ ಮುಸ್ಲಿಮರು ಪಾಲ್ಗೊಳ್ಳುವಂತಾಗಲಿ- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ಭಾರತದಲ್ಲಿ ಹಿಂದೂ ಮುಸಲ್ಮಾನರ ನಡುವೆ ಸಾಮರಸ್ಯ ಬೆಳೆಯಬೇಕು. ಎರಡೂ ಧರ್ಮಕ್ಕೆ ಶಾಂತಿ ಸಹೋದರತೆಯ ಆಕಾಂಕ್ಷೆ ಇದೆ. ಕೆಲ ವಿಚಾರಗಳು ಘಟನೆಗಳು ಎರಡು ಧರ್ಮವನ್ನು ದೂರ ಮಾಡುತ್ತಿವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎರಡೂ ಧರ್ಮಕ್ಕೆ ನೆಮ್ಮದಿ, ಶಾಂತಿ ಬೇಕಾಗಿದೆ. ದೇಶದಲ್ಲಿ ನಡೆಯುವ ಕೆಲ ಘಟನೆಗಳು ಎರಡು ಸಮುದಾಯವನ್ನು ದೇಶದಲ್ಲಿ ದೂರ ಮಾಡಲು ಕಾರಣವಾಗುತ್ತಿದೆ. ನಮ್ಮ ನಡುವೆ ಅಪನಂಬಿಕೆ ದೂರವಾಗಬೇಕು. ಪರಸ್ಪರ ಎರಡು ಧರ್ಮಗಳ ನಡುವೆ ಸೌಹಾರ್ದತೆ ಬೆಳೆಯಬೇಕು ಎಂದು ಹೇಳಿದರು.

ನಮ್ಮ ಉತ್ಸವದಲ್ಲಿ ನೀವು, ನಿಮ್ಮ ಧಾರ್ಮಿಕ ಕಾರ್ಯಕ್ರಮ ಉರೂಸ್ ನಲ್ಲಿ ನಾವು ಪಾಲ್ಗೊಳ್ಳುವಂತಾಗಬೇಕು. ಒಬ್ಬರಿಬ್ಬರಿಂದ ಇಂತಹ ಬದಲಾವಣೆ ಅಸಾಧ್ಯ. ಇಡೀ ಸಮಾಜಕ್ಕೆ ಸಮಾಜ, ಊರಿಗೆ ಊರು ಶಾಂತಿ ಸಾಮರಸ್ಯ ಬಯಸುವ ಕಾಲ ಬರಬೇಕು ಎಂದರು. ಭಟ್ಕಳದ ಮುಸಲ್ಮಾನರು ಪೇಜಾವರ ಮಠಕ್ಕೆ ಬಂದು ಗುರುಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದನ್ನು ಕಿರಿಯಶ್ರೀಗಳು ಸ್ಮರಿಸಿ, ಬಂದವರಿಗೆ ಅಭಿನಂದನೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *