ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

ಬೆಂಗಳೂರು: ಮರ್ಮ ಎಂಬ ಚಿತ್ರದಿಂದ ಆರಂಭವಾಗಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ಖುಷಿಗಳು ಒಂದೆರಡಲ್ಲ. ಕನ್ನಡ ಚಿತ್ರರಂಗ ಒಂಥರಾ ಏಕತಾನತೆಯಿಂದ ಕೂಡಿದ್ದ ಕಾಲದಲ್ಲಿಯೇ ಹೊಸಾ ಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ರುಚಿ ಹತ್ತಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?

ತರ್ಕ, ಉತ್ಕರ್ಷದಂಥಾ ಚಿತ್ರಗಳ ಮೂಲಕ ಹೊಸಾ ಟ್ರೆಂಡಿಂಗ್ ಹುಟ್ಟು ಹಾಕಿದ್ದವರು ದೇಸಾಯಿ. ಅವರು ಬಹು ಕಾಲದದ ನಂತರ ಈ ಕಥೆ ಮಾಡಿಕೊಂಡು ಅಖಾಡಕ್ಕಿಳಿದಾಗ ಅಂಥಾದ್ದೇ ರಗಡ್ ಸೌಂಡಿಂಗ್ ಇರೋ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದರಂತೆ. ಕಡೆಗೂ ಅವರೇ ಉದ್ಘರ್ಷ ಅನ್ನೋ ಪದವನ್ನು ಹುಟ್ಟು ಹಾಕಿದ್ದರಂತೆ. ಅದರ ಅರ್ಥ ಅದೇನಿದೆಯೋ… ಆದರೆ ಅದರಲ್ಲೊಂದು ಸೌಂಡಿಂಗ್ ಇದೆ ಎಂಬ ಕಾರಣದಿಂದ ಅವರು ಈ ಟೈಟಲ್ ಅಂತಿಮಗೊಳಿಸಿದ್ದರಂತೆ.

ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಉದ್ಘರ್ಷದ ಅಸಲೀ ಖದರ್ ಏನೆಂಬುದು ಜಾಹೀರಾಗಿದೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಹುಟ್ಟಿಸಿರೋ ಸಂಚಲನ ಸಣ್ಣ ಮಟ್ಟದ್ದೇನಲ್ಲ. ಉದ್ಘರ್ಷ ಎಂಬ ಅನಿರೀಕ್ಷಿತವಾಗಿ ಹುಟ್ಟು ಪಡೆದ ಟೈಟಲ್ಲೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

ಪ್ರೇಕ್ಷಕರನ್ನ ಪ್ರತೀ ಕ್ಷಣವೂ ಕುತೂಹಲದ ಕಾವಲಿಯಲ್ಲಿ ಕೂರಿಸುವಂಥಾ ಉದ್ಘರ್ಷ ಈ ವಾರ ತೆರೆ ಕಾಣುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷದ ಅಬ್ಬರ ಈ ವಾರವೇ ಶುರುವಾಗಲಿದೆ!

Comments

Leave a Reply

Your email address will not be published. Required fields are marked *