ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಕಲಬುರಗಿ: ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಹಿಂದೂ ವ್ಯಕ್ತಿ ಕನ್ಹಯ್ಯ ಹತ್ಯೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಇಡೀ ದೇಶ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕನ್ಹಯ್ಯ ಲಾಲ್ ಅವರನ್ನು ಆತನ ಅಂಗಡಿಗೆ ನುಗ್ಗಿ ಹಾಡು ಹಗಲೇ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳಾದ ಮೊಹಮ್ಮದ್‌ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು 

ಕೊಲೆ ಮಾಡಿದ ನಂತರ ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ಹತ್ಯೆಯ ನಂತರ ವೀಡಿಯೋ ಮಾಡಿ ರಸಲುಲ್ಲಾ ಜಯೆಂಗೆ ಆಪ್ ಕೆ ಲೀಯೇ ಔರ್ ಮರೆಂಗೆ ಆಪ್ ಕೆ ಲಿಯೆ(ನಿಮಗಾಗಿ ಇನ್ನೂ ತುಂಬಾ ಜನ ಸಾಯುತ್ತಾರೆ) ಅಂತ ವೀಡಿಯೋ ಹರಿ ಬಿಟ್ಟಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆವೊಡ್ಡಿದ್ದಾರೆ ಎಂದು ಅಸಮಾಧಾನಗೊಂಡರು.

ವೀಡಿಯೋ ಹರಿ ಬಿಟ್ಟು ಮತ್ತೆ ಪರಿಸ್ಥಿತಿ ಉದ್ವಿಗ್ನವಾಗುವಂತೆ ಮಾಡಿದ್ದಾರೆ. ಇಂಥಹ ಕೊಲೆಗಡುಕರು ಇವರು ಐಸಿಸ್‍ನ ಏಜೆಂಟರು. ಇವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿ ಪೋಷಿಸಬಾರದು. ಇವರನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿ ಕಾಂಗ್ರೆಸ್ ಮುಸ್ಲಿಮರ ತುಷ್ಠಿಕರಣ ಮಾಡ್ತಿದೆ. ಕಾಂಗ್ರೆಸ್ ಮುಸ್ಲಿಂ ತುಷ್ಠಿಕರಣ ಮಾಡಿದಕ್ಕೆ ಇಂಥಹ ಘಟನೆ ಜರುಗಿದೆ. ಇಂಥಹ ಘಟನೆ ಮತ್ತೆ ಮರುಕಳಿಸಬಾರದು ಅಂದ್ರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:  ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ 

ಒಂದು ವೇಳೆ ಇಂಥಹ ಘಟನೆ ಮತ್ತೆ ಮರುಕಳಿಸಿದ್ರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು. ಈ ಘಟನೆಯಿಂದ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಸುರಕ್ಷಿತ ಇಲ್ಲ. ಅದಕ್ಕೆ ಇಂದು ನಡೆದ ಹಿಂದೂ ವ್ಯಕ್ತಿಯ ಕೊಲೆ ಸಾಕ್ಷಿ ಎಂದರು.

Live Tv

Comments

Leave a Reply

Your email address will not be published. Required fields are marked *