ಎತ್ತಿನ ಬಂಡಿ ಓಡಿಸುವಾಗ ಆಯತಪ್ಪಿ ಬಿದ್ದ ಯುವಕರು!

ಕೊಪ್ಪಳ: ಎತ್ತಿನ ಬಂಡಿ ಓಡಿಸುವಾಗ ಯುವಕರು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ತಹಶೀಲ್ದಾರ್ ಕಚೇರಿ ಬಳಿ ನಡೆದಿದೆ.

ಕಾರ ಹುಣ್ಣಿಮೆ ನಿಮಿತ್ತ ಗುರುವಾರ ಎತ್ತಿನ ಬಂಡಿ ಓಟ ಆಯೋಜಿಸಲಾಗಿತ್ತು. ಈ ವೇಳೆ ಯುವಕರ ಗುಂಪೊಂದು ಎತ್ತುಗಳನ್ನು ಓಡಿಸುತ್ತಾ ಬರುತ್ತಿದ್ದರು.  ನಗರದ ತಹಶೀಲ್ದಾರ್ ಕಚೇರಿ ಬಳಿ ಎತ್ತುಗಳನ್ನು ಓಡಿಸುವ ಬರದಲ್ಲಿ ಇಬ್ಬರು ಯುವಕರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಿರುಸಾಗಿ ಓಡುತ್ತಿದ್ದ ಎತ್ತಿನ ಕಾಲಡಿಯಲ್ಲಿ ಸಿಲುಕಿದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ಯುವಕರು ಪಾರಾಗಿದ್ದಾರೆ.

ಎತ್ತು ಓಡಿಸುವಾಗ ಯುವಕರು ಬಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಎತ್ತು ಓಡಿಸುವಾಗ ಕ್ಷಣಕಾಲ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಂಭವಿಸಬಹುದಾಗಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.

Comments

Leave a Reply

Your email address will not be published. Required fields are marked *