ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ರಕ್ಷಿಸಲು ಮುಂದಾದ ಯುವತಿ ನೀರುಪಾಲು

ಬಾಗಲಕೋಟೆ: ನೀರಿರುವ ಕ್ವಾರಿಯಲ್ಲಿ ಮುಳುಗುತ್ತಿದ್ದ ಬಾಲಕರನ್ನು ರಕ್ಷಿಸಲು ಮುಂದಾದ ಯುವತಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಹೊಸುರು ತಾಂಡಾದಲ್ಲಿ ನಡೆದಿದೆ.

ನೇತ್ರಾವತಿ ಚವ್ಹಾಣ್ (18) ಮತ್ತು ಗಣೇಶ್ ರಾಥೋಡ್ (10) ಮೃತ ದುರ್ದೈವಿಗಳು. ಇತ್ತೀಚಿಗೆ ಮಳೆ ಆಗಿದ್ದರಿಂದ ಕಲ್ಲು ಕ್ವಾರಿಯಲ್ಲಿ ನೀರು ತುಂಬಿಕೊಂಡಿತ್ತು. ಇಂದು ನೇತ್ರಾವತಿ ಬಟ್ಟೆ ತೊಳೆಯಲು ಹೋದಾಗ ಗಣೇಶ್ ಮತ್ತು ಮುತ್ತು ಎಂಬ ಬಾಲಕರು ನೀರಲ್ಲಿ ಆಟವಾಡುತ್ತಿದ್ದರು. ನೀರಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ಆಯತಪ್ಪಿ ಮುಳಗತೊಡಗಿದ್ದರು.

ಸ್ಥಳದಲ್ಲಿದ್ದ ನೇತ್ರಾವತಿ ಮುಳುಗುತ್ತಿದ್ದ ಮುತ್ತು ಎಂಬ ಬಾಲಕನನ್ನು ರಕ್ಷಿಸಿದ್ದರು. ಇನ್ನು ನೀರಲ್ಲಿ ಉಳಿದ ಇನ್ನೊಬ್ಬ ಗಣೇಶ್‍ನನ್ನು ರಕ್ಷಿಸಲು ಮುಂದಾಗಿದ್ದಾಗ, ದುರಾದೃಷ್ಟವಶಾತ್ ಗಣೇಶ್ ಜೊತೆ ಯುವತಿ ನೇತ್ರವಾತಿಯೂ ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *