ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

ರಾಯಚೂರು: ನಿಧಿಯ ಆಸೆಗಾಗಿ ಬಸವ ಮೂರ್ತಿಯನ್ನ ಭಗ್ನಗೊಳಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲುಬುರಗಿಯ ಸೋಮು ಹಾಗೂ ಜಮಖಂಡಿ ತಾಂಡದ ಭೀಮು ಬಂಧಿತ ಆರೋಪಿಗಳು. ರಾಯಚೂರಿನ ದೇವದುರ್ಗದ ಬೆಣಕಲ್ ಗ್ರಾಮದ ಬಳಿಯಿರುವ ಅಣೇಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದಲ್ಲಿದ್ದ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

ಜನವರಿಯಲ್ಲಿ ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ವಜ್ರಬಂಡೆಯಲ್ಲಿ ನಿಧಿಯ ಆಸೆಗಾಗಿ ಕೆಲ ದುಷ್ಕರ್ಮಿಗಳು ಪುರಾತನ ಕಾಲದ ಬಸವ ಮೂರ್ತಿಯ ತಲೆ ಕತ್ತರಿಸಿ ಬಳಿಕ ಪರಾರಿಯಾಗಿದ್ದರು.

ರಾಯಚೂರಿನಲ್ಲಿ ನಡೆದ ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *