ಜಲ್ಲಿ ಬಂಕರ್ ಕುಸಿದು ಇಬ್ಬರು ಕಾರ್ಮಿಕರ ಸಾವು

ಉಡುಪಿ: ಜಲ್ಲಿ ಬಂಕರ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರದ ಮೂಕಾಂಬಿಕಾ ಕ್ರಷರ್‍ನಲ್ಲಿ ನಡೆದಿದೆ.

ಸಂಜೀವ ಮತ್ತು ಜಗದೀಶ್ ಸಾವನ್ನಪ್ಪಿದ ಕಾರ್ಮಿಕರು. ಜಲ್ಲಿ ಪುಡಿ ತುಂಬಿಸುತ್ತಿದ್ದ ವೇಳೆ ಅವಘಡ ನಡೆದಿದ್ದು ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕ್ರಷರ್‍ನಲ್ಲಿ ಬಂಡೆ ಕಲ್ಲನ್ನು ಪುಡಿ ಮಾಡಿ, ಜಲ್ಲಿ ಬಂಕರ್ ಒಳಗೆ ತುಂಬಿಸಿಡಲಾಗುತ್ತದೆ. ಬಂಕರ್‍ನಿಂದ ಟಿಪ್ಪರ್‍ಗೆ ಜಲ್ಲಿಯನ್ನು ತುಂಬಿ ಸಾಗಾಟ ಮಾಡಲಾಗುತ್ತದೆ.

ಟಿಪ್ಪರ್‍ಗೆ ಜಲ್ಲಿ ಬಂಕರ್‍ನಿಂದ ಜಲ್ಲಿ ತುಂಬಿಸುತ್ತಿದ್ದ ವೇಳೆ ಬಂಕರ್ ತಗಡು ಶೀಟ್ ಕುಸಿದಿದೆ. ಜಲ್ಲಿ ರಾಶಿಯ ಕೆಳಗೆ ಸಿಲುಕಿಕೊಂಡ ಇಬ್ಬರೂ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬುಲ್ಡೋಜರ್ ಮೂಲಕ ಕುಸಿದ ಬಂಕರ್ ತೆರವುಗೊಳಿಸುವಷ್ಟರಲ್ಲಿ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದಾರೆ.

ಉಡುಪಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *