ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ

ಶಿವಮೊಗ್ಗ: ಒಂದೇ ಗ್ಯಾಂಗ್‍ನಿಂದ ಎರಡು ಕಡೆ ನಾಲ್ವರನ್ನು ಅಪಹರಿಸಿ ಏಳು ಲಕ್ಷ ದೋಚಿ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರೌಡಿ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್ ಬಚ್ಚ ಮತ್ತು ಗ್ಯಾಂಗ್ ಈ ಕೃತ್ಯ ಎಸಗಿದೆ. ಶಿವಮೊಗ್ಗದ ಪ್ರತಿಷ್ಠಿತ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಅಬಿಬ್ ಅಳಿಯ ಸಮಿ, ಮತ್ತವರ ಗೆಳೆಯ ಗ್ರಾನೈಟ್ ವ್ಯಾಪಾರಿ ಅನ್ಸರ್ ಸೇರಿ ನಾಲ್ವರ ಅಪಹರಣ ಮಾಡಲಾಗಿದೆ.

ಚಾಲುಕ್ಯ ನಗರದಲ್ಲಿ ನಾಲ್ವರನ್ನು ಅಪಹರಿಸಿ, ನಾನಾ ಕಡೆ ಸುತ್ತಾಡಿಸಿ ದುಡ್ಡು ದೋಚಿ ಕೊನೆಗೆ ಅನುಪಿನ ಕಟ್ಟೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರು ಎಲ್ಲಾ ಕಡೆ ನಾಕಾಬಂಧಿ ಹಾಕಿದ್ದಾರೆ ಅನ್ನೋದು ಅರಿವಾದ ಕೂಡಲೇ ತಮ್ಮನ್ನು ಬೆನ್ನತ್ತಿದ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಲಕ್ಷ್ಮೀ ಟಾಕೀಸ್ ಬಳಿ ಇನ್ನೋವಾ ಕಾರು ಬಿಟ್ಟು ಪಾತಕಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ದೊಡ್ಡಪೇಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *