ನನ್ನನ್ನು ಹೊಡೆದು ಬಡಿದು ತಾಳಿ ಕಟ್ಟಿಸಿದ್ರು-2ನೇ ಪತಿಯಿಂದ ದೂರು

-ಮಾಜಿ ಪತಿಯೇ ಮುಂದೆ 2ನೇ ಮದ್ವೆಯಾದ ಪತ್ನಿ

ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಗೆ ಮಾಜಿ ಪತಿಯೇ ಮುಂದೆ ನಿಂತು ಮದುವೆ ಮಾಡಿಸಿದ ವಿಚಿತ್ರ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಸ್ಟ್ ಸಿಕ್ಕಿದೆ.

ನನ್ನನ್ನು ಹೊಡೆದು ಬಡೆದು ಅಂದು ಮನೆಯಲ್ಲಿ ಕೂಡಿ ಹಾಕಿ ರಚನಾರಿಗೆ ಬಲವಂತವಾಗಿ ತಾಳಿ ಕಟ್ಟಿಸಿದ್ದಾರೆ ಎಂದು ರಚನಾರ ಎರಡನೇ ಪತಿ ಮಂಜುನಾಥ್ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ರಚನಾ ಎಂಬವರು ತಮ್ಮ ಶಾಲಾ ವಾಹನದ ಚಾಲಕ ಮಂಜುನಾಥ್ ಎಂಬವರೊಂದಿಗೆ ಮನೆಯಲ್ಲಿ ದೇವರ ಮುಂದೆ ವಿವಾಹವಾಗಿದ್ದರು. ಈ ವೇಳೆ ರಚನಾರ ಮೊದಲ ಪತಿ ಈಶ್ವರ ಗೌಡ ಸಹ ಹಾಜರಾಗಿದ್ದು, ತಮ್ಮ ಮುಂದಾಳತ್ವದಲ್ಲಿಯೇ ತಮ್ಮ ಪತ್ನಿಯ ಮದುವೆಯನ್ನು ಮಾಡಿದ್ದರು.

 

ಮಂಜುನಾಥ್ ಈ ಮೊದಲು ಈಶ್ವರಗೌಡ ಒಡೆತನದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಲೈಂಗಿಕವಾಗಿ ರಚನಾ ತನ್ನನ್ನ ಬಳಸಿಕೊಂಡಿದ್ದಾರೆ. ಹಾಗಾಗಿ ನಾನು ಅವರ ಕಾಟ ತಾಳಲಾರದೆ ಕೆಲಸ ಬಿಟ್ಟು ಕೆಆರ್.ಪುರಂನ ಖಾಸಗಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೇ ಈಗ ತನ್ನನ್ನ ಕಿಡ್ನಾಪ್ ಮಾಡಿ ನನಗೆ ಹಿಗ್ಗಾಮುಗ್ಗಾ ಥಳಿಸಿ, ಬೆದರಿಸಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಅಂತ ಮಂಜುನಾಥ್ ಆರೋಪಿಸಿದ್ದಾರೆ.

ಇತ್ತ ರಚನಾ ಕೂಡ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಾಜಿ ಗಂಡನ ಎದುರೇ 2ನೇ ಮದ್ವೆಯಾದ ಮಹಿಳೆ

 

Comments

Leave a Reply

Your email address will not be published. Required fields are marked *