ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಸೌಂದರ್ಯ ಎಂದ ಖಾದರ್

ತುಮಕೂರು: ಮೈತ್ರಿ ಸರ್ಕಾರದ 12 ಜನ ಶಾಸಕರುಗಳು ರಾಜೀನಾಮೆ ನೀಡುತ್ತಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ “ಇವೆಲ್ಲಾ ಪ್ರಜಾಪ್ರಭುತ್ವದ ಸೌಂದರ್ಯ” ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ರೀತಿಯ ಕೆಲವು ವಿಚಾರಗಳು ಬರುತ್ತವೆ. ಇವೆಲ್ಲಾ ಬ್ಯೂಟಿ ಆಫ್ ಡೆಮಾಕ್ರಸಿ ಎಂದು ಉತ್ತರಿಸಿದರು.

ಶಾಸಕರು ರಾಜೀನಾಮೆ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮೈತ್ರಿ ಸರ್ಕಾರ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿದರು. ರಾಜೀನಾಮೆ ಕೊಟ್ಟ ಬಹುತೇಕ ಶಾಸಕರು ಸಿದ್ದರಾಮುಯ್ಯನವರ ಬೆಂಬಲಿಗರು ಎಂಬ ಮಾತಿಗೆ ಉತ್ತರಿಸಿದ ಖಾದರ್, ಕಾಂಗ್ರೆಸ್ಸಿನ ಎಲ್ಲಾ ಶಾಸಕರಿಗೂ ಸಿದ್ದರಾಮಯ್ಯ ನಾಯಕರು ಎಂದು ಹೇಳಿ ಸುಮ್ಮನಾದರು.

Comments

Leave a Reply

Your email address will not be published. Required fields are marked *