ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಕೊಟ್ಟಿಲ್ಲ ಅನ್ನೋ ಆರೋಪಕ್ಕೆ ಖುದ್ದು ದೇವೇಗೌಡರೇ ತಿರುಗೇಟು ಕೊಟ್ಟಿದ್ದಾರೆ.

ತುಮಕೂರು ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ರಾಷ್ಟ್ರದಲ್ಲಿ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ಕೊಡೋದು ಎಂದು ಹೇಳಿದ್ದಾರೆ.

ಕೆಲವರು ತಮ್ಮನ್ನು ವಿನಾಕಾರಣ ದೂಷಿಸುತ್ತಾರೆ. ಆದ್ರೆ ವಾಸ್ತವ ಬೇರೆ ಇದೆ. ಈ ಹಿಂದೆ ಇಂದಿರಾಗಾಂಧಿ ಇದ್ದಾಗ ನಾನು ನೀರಾವರಿ ಮಂತ್ರಿಯಾಗಿದ್ದೆನು. ಆ ಸಂದರ್ಭದಲ್ಲಿ ಎರಡು ದಿನ ಚರ್ಚೆಯಾಯ್ತು. ಇಡೀ ಹಿಂದೂಸ್ಥಾನದ ನೀರಾವರಿ ಖಾತೆ ಹೊಂದಿದ ಮಂತ್ರಿಗಳು ಸಭೆ ನಡೆಸಿದ್ರು.

ನೀರಿನ ಬಳಕೆ ಹಾಗೂ ಎಲ್ಲಾ ನದಿಗಳ ಜೋಡಣೆ ಬಗ್ಗೆ ಅಭಿಪ್ರಾಯ ಕುರಿತು ಇಂದಿರಾಗಾಂಧಿ ಅವರು 2 ಕಮಿಟಿ ಮಾಡಿದ್ರು. ನದಿಗಳ ನೀರು ಎಲ್ಲಿ ಹೆಚ್ಚು ಪ್ರವಾಹ ಹರಿಯುತ್ತೋ, ಅಂತಹ ನದಿಗಳಿಂದ ನೀರು ಸಂಗ್ರಹದ ಬಗ್ಗೆ ಕಮಿಟಿಯಲ್ಲಿ ಚಿಂತನೆ ನಡೆದಿತ್ತು. ಆದ್ರೆ ತುಮಕೂರಿಗೂ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಏನಿಲ್ಲ ಎಂದು ಗೌಡರು ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *