ವಿಡಿಯೋ: ರಾಸುಗಳಿಗೆ ನಿತ್ಯ ಮೇವನ್ನು ಹೊಂದಿಸಲು ಮೇವಿನ ಲಾರಿಗಳ ಹಿಂದೆ ಓಡ್ತಿದ್ದಾರೆ ರೈತರು!

ತುಮಕೂರು: ಇತ್ತೀಚಿನ ವರ್ಷಗಳಲ್ಲಿ ಬರದ ಛಾಯೆ ಯಾವ ರೀತಿಯಲ್ಲಿದೆ ಅಂದರೆ ರೈತರು ತಾವು ಸಾಕಿರುವ ರಾಸುಗಳಿಗೆ ಮೇವು ಸಿಗುತ್ತಿಲ್ಲ. ಇನ್ನು ಕೆಲ ಕಡೆ ಮಳೆ ಮರೀಚಿಕೆಯಾಗಿದ್ದು, ಬೆಳೆ ಇಲ್ಲದೇ ರೈತಾಪಿ ವರ್ಗ ಹಣೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ರೈತ ಎಷ್ಟು ಬಳಲಿದ್ದಾನೆ ಎನ್ನುವುದಕ್ಕೆ ಜಿಲ್ಲೆಯ ಹೊಲತಾಳು ಗ್ರಾಮದ ಬರದ ಸುದ್ದಿ ಓದಿದ್ರೆ ನಿಮಗೆ ತಿಳಿಯುತ್ತದೆ.

ಬರದಿಂದಾಗಿ ಹಸುಗಳಿಗೆ ಮೇವು ಸಿಗದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದ ರೈತರು ಮೇವು ತುಂಬಿದ ಲಾರಿಗಳ ಹಿಂದೆ ಓಡಿ ಅವುಗಳಿಂದ ಬಿದ್ದ ಅಲ್ಪ ಸ್ವಲ್ಪ ಮೇವನ್ನು ಸಂಗ್ರಹಿಸುತ್ತಿದ್ದಾರೆ.

ನಿತ್ಯ ರಾಜ್ಯ ಹೆದ್ದಾರಿ ಮುಖಾಂತರ ಕೊರಟಗೆರೆ ಮಾರ್ಗವಾಗಿ ಮಧುಗಿರಿ ಶಿರಾ ಪಾವಗಡ ತಲುಪುವ ಮೇವಿನ ಲಾರಿಗಳಿಗಾಗಿ ಕಾದು ಕುಳಿತುಕೊಳ್ಳುವ ರೈತರು ಲಾರಿ ಬಂದ ತಕ್ಷಣ ಅದರ ಹಿಂದೆಯೇ ಓಡುತ್ತಾರೆ.

ಕೆಲವೊಮ್ಮೆ ಲಾರಿಯಿಂದ ಮೇವನ್ನು ಕೀಳುವ ಪ್ರಯತ್ನ ಮಾಡುತ್ತಾರೆ. ಸಾಧ್ಯವಾಗದಿದ್ದರೆ ಮರದ ಮೇಲೆ ಹತ್ತಿ ಕುಳಿತು ಲಾರಿಗಳು ಮರದ ಅಡಿ ಚಲಿಸುವಾಗ ದೊಣ್ಣೆಯಿಂದ ಮೇವನ್ನು ಬೀಳಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ. ಜನ ಮೇವನ್ನು ಸಂಗ್ರಹಿಸುತ್ತಿರುವ ನೋವಿನ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://youtu.be/KBEXrJn4494

 

Comments

Leave a Reply

Your email address will not be published. Required fields are marked *