ರಸ್ತೆ ದಾಟ್ತಿದ್ದಾಗ ಮರಳಿನ ಲಾರಿ ಹರಿದು 60 ಕುರಿಗಳು ಸಾವು

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಗಡಿ ಗ್ರಾಮವಾದ ತಿಂಥಣಿ ಬ್ರೀಜ್ ಮೇಲೆ ಬೆಳ್ಳಂಬೆಳಗ್ಗೆ ಮರಳಿನ ಲಾರಿ ಹರಿದು 60 ಕುರಿಗಳ ಮಾರಣಹೋಮ ನಡೆದಿದೆ.

ತಿಂಥಣಿ ಬ್ರೀಜ್ ಮೇಲೆ ಹುಣಸಗಿ ತಾಲೂಕಿನ ಕಮಲಾಪುರದ ಭೀಮಣ್ಣ ಹೋಸಮನಿ, ದ್ಯಾಮಣ್ಣ ಹೊಸ ಮನಿ ಅವರಿಗೆ ಸೇರಿದ 60 ಕುರಿಗಳು ಸಾವನ್ನಪ್ಪಿವೆ. ಬೆಳಗ್ಗಿನ ಜಾವ ಕುರಿಗಳನ್ನು ಮೇಯಿಸಲು ಸೇತುವೆ ದಾಟಿಸುತ್ತಿದ್ದಾಗ ಅತೀ ವೇಗದಿಂದ ಬಂದ ಲಾರಿ, ಏಕಾಏಕಿ ಕುರಿಗಳ ಮೇಲೆ ಹರಿದಿದೆ. ಇದರಿಂದ ಸುಮಾರು 80 ಕುರಿಗಳ ಪೈಕಿ 60 ಕುರಿಗಳು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದು, ಇನ್ನೂ 20 ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.

ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಸ್ಥಳದಲ್ಲಿ ಲಾರಿ ಬಿಟ್ಟು ಪರಿಯಾಗಿದ್ದು, ಸ್ಥಳಕ್ಕೆ ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *