ಗಮನಿಸಿ, ಆಗಸ್ಟ್ 7 ರಂದು ಸಾರಿಗೆ ಮುಷ್ಕರ – ಬಿಎಂಟಿಸಿ, ಕೆಎಸ್ಆರ್‌ಟಿಸಿ ರಸ್ತೆಗೆ ಇಳಿಯಲ್ಲ

ಬೆಂಗಳೂರು: 2017ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿ ರಸ್ತೆ ಸಾರಿಗೆ ಕಾರ್ಮಿಕ ಮತ್ತು ಮಾಲೀಕರ ಸಂಘಟನೆ ದೇಶಾದ್ಯಂತ ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿದೆ.

ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವೇದಿಕೆ ಮುಖಂಡರು, ಕೇಂದ್ರ ಸರ್ಕಾರದ ಜಾರಿಗೆ ತಂದಿರುವ 2017 ರ ಮೋಟಾರು ತಿದ್ದುಪಡಿ ಕಾಯ್ದೆಯ ವಿರುದ್ಧ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಈ ಹೋರಾಟದಲ್ಲಿ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳು ಸೇರಿದಂತೆ ಬಿಎಂಟಿಸಿ ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 6 ರಿಂದ ಸಂಜೆ 6ವರೆಗೂ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸದ್ಯ ಆಗಸ್ಟ್ 07 ರಂದು ನಡೆಯುವ ಮುಷ್ಕರಕ್ಕೆ ಆಟೋ ಚಾಲಕರ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ ಹಾಗೂ ಬಿಎಂಟಿಸಿ ಯೂನಿಯನ್ ಸಾಥ್ ನೀಡಿದೆ. ಬಂದ್ ಕುರಿತು ಹೀಗಾಗಲೇ ನೌಕರರಿಗೆ ಮಾಹಿತಿ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಫೆಡರೇಷನ್ ಅಧ್ಯಕ್ಷ ಹೆಚ್ ಡಿ ರೇವಪ್ಪ ಪಬ್ಲಿಕ್ ಟಿವಿಗೆ ಹೇಳಿಕೆದ್ದಾರೆ.

ಮಸೂದೆಗೆ ವಿರೋಧ ಯಾಕೆ?
ಕೇಂದ್ರ ಜಾರಿಗೆ ತಂದಿರುವ ಹೊಸ ನೀತಿ ಇಂದ ರಾಜ್ಯ ವಾಹನಗಳಿಗೆ ಪರ್ಮೀಟ್ ನೀಡುದಕ್ಕೆ ಹಾಗೂ ಸಾರಿಗೆ ನೀತಿರೂಪಣೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕಾಗಲಿದೆ. ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಲಿದೆ. ರಾಷ್ಟ್ರೀಯ ಸಾರಿಗೆ ನೀತಿ ಅಡಿ ರಾಜ್ಯಗಳ ಒಪ್ಪಿಗೆ ಇಲ್ಲದೇ ಕೇವಲ ಅಭಿಪ್ರಾಯವಷ್ಟೇ ಪಡೆದು ಹೊಸ ನೀತಿಯನ್ನು ಕೇಂದ್ರ ಜಾರಿಗೆ ತರಬಹುದು. ಇದರಿಂದ ಸಾರಿಗೆ ಇಲಾಖೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಅಗ್ರಿಗೇಟರ್ ಲೈಸೆನ್ಸ್ ಅನ್ನು ರಾಜ್ಯಸರ್ಕಾರ ನೀಡಬಹುದಾದರೂ ನೀಡುವ ಮಾನದಂಡವನ್ನ ಕೇಂದ್ರ ತೀರ್ಮಾನಿಸಲಿದೆ.

ಹೊಸ ಕಾಯ್ದೆಯಿಂದ ಊಬರ್, ಓಲಾ ದಂತಹ ಖಾಸಗಿ ದೊಡ್ಡ ಸಂಸ್ಥೆಗಳ ಆರ್ಭಟ ಹೆಚ್ಚಾಗಲಿದೆ. ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಮುಂತಾದವುಗಳನ್ನು ಕಾರ್ಪೋರೇಟ್, ಆಟೋ ಮೊಬೈಲ್ ಕಂಪನಿಗಳ ಹಿಡಿತಕ್ಕೆ ಒಪ್ಪಿಸಲಾಗುತ್ತದೆ. ಎಲ್ಲವೂ ದುಬಾರಿ ಶುಲ್ಕ ಗಳ ಸುಲಿಗೆ ಕೇಂದ್ರಗಳಾಗುತ್ತೆ. ದಂಡಗಳ ಪ್ರಮಾಣ ಭಾರೀ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *