ಸೀರೆ ಧರಿಸಿ ಭಿಕ್ಷೆ ಬೇಡಲು ಒಪ್ಪದಕ್ಕೆ ಮಂಗಳಮುಖಿಯ ಬರ್ಬರ ಹತ್ಯೆ!

ಬಳ್ಳಾರಿ: ಸೀರೆ ಉಟ್ಟು ಭಿಕ್ಷೆ ಬೇಡಲು ಒಪ್ಪದ ಮಂಗಳಮುಖಿಯನ್ನ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಇಂದು ಮಧ್ಯಾಹ್ನ ಬಳ್ಳಾರಿಯ ಕೌಲಬಜಾರ ಪ್ರದೇಶದ ಮೊದಲನೇ ಗೇಟ್ ಬಳಿಯ ರಾಜಕಾಲುವೆಯಲ್ಲಿ ಶವ ಪತ್ತೆಯಾಗಿದೆ.

ಸೀರೆ ಧರಿಸಿ ಭಿಕ್ಷೆ ಬೇಡುವಂತೆ ನಿತ್ಯ ಹಿಂಸಿಸುತ್ತಿದ್ದ ಹಿಜಡಾಗಳ ತಂಡ ಮಂಗಳಮುಖಿ ಇಮ್ತಿಯಾಜ್ ಅಲಿಯಾಸ್ ಇಂನ್ತೂನನ್ನೂ ಕೊಲೆ ಮಾಡಿ ಚರಂಡಿಯಲ್ಲಿ ಬಿಸಾಕಿದ್ದಾರೆ ಎಂದು ಇಮ್ತಿಯಾಜ್ ಸಂಬಂಧಿಕರು ಕೌಲಬಜಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಆರ್ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *