ಸಿಎಂ ವಿರುದ್ಧ ದಾಖಲೆಗಳ ಬಿಡುಗಡೆ ವಿಚಾರದಲ್ಲಿ ಬಿಎಸ್‍ವೈ ಯುಟರ್ನ್

ಬೆಳಗಾವಿ: ಸಿಎಂ ಸಿದ್ದರಾಮಯ್ಯನವರ ವಿರುದ್ಧದ ದಾಖಲೆಗಳನ್ನ ನಾಳೆ ಬಿಡುಗಡೆ ಮಾಡುವುದಿಲ್ಲ, ಇನ್ನು ಮೂರು ದಿನ ಬಿಟ್ಟು ಬಿಡುಗಡೆ ಮಾಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಅಧಿಕಾರಿಗಳು ತಗೆದಿಟ್ಟುಕೊಂಡಿದ್ದ ಫೈಲುಗಳು ಈಗ ಇಲ್ಲ ಎಂದು ಹೇಳುತ್ತಿದ್ದಾರೆ. ಮಹತ್ವದ ದಾಖಲೆಗಳ ಕಾಪಿಯನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅಧಿಕಾರಿಗಳು ದಾಖಲೆಗಳನ್ನು ಕೊಡದಿದ್ದರೂ ಪರವಾಗಿಲ್ಲ ನಾವು ಸಂಗ್ರಹಿಸಿ ಇಟ್ಟುಕೊಂಡಿರುವ ದಾಖಲೆಗಳನ್ನು ಮೂರುದಿನ ಬಿಟ್ಟು ಬಿಡುಗಡೆ ಮಾಡುತ್ತೇನೆಂದು ಯಡಿಯೂರಪ್ಪ ತಿಳಿಸಿದರು.

Comments

Leave a Reply

Your email address will not be published. Required fields are marked *