ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈಹಿಕವಾಗಿ ಎಲ್ಲರ ನಡುವೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಹಾಗೇ ಉಳಿದುಕೊಂಡಿದೆ. ಈ ಪೈಕಿ ತಪ್ತ ಮುದ್ರಾಧಾರಣೆಯೂ ಒಂದು. ಕಾರಣ ಇಂದು ತಪ್ತ ಮುದ್ರಾಧಾರಣೆ.

ಮುದ್ರಾಧಾರಣೆ ಅಂದ ತಕ್ಷಣ ಉಡುಪಿಲ್ಲಿರುವ ಶ್ರೀಕೃಷ್ಣ ಭಕ್ತರಿಗೆ ಮೊದಲು ನೆನಪಾಗೋದು ಶಿರೂರು ಸ್ವಾಮೀಜಿ. ಎಲ್ಲಾ ಮಠಗಳಿಗಿಂತ ಮೊದಲು ಶಿರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗುತ್ತಿತ್ತು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಬಾರದು ಅಂತ ಶಿರೂರು ಸ್ವಾಮೀಜಿ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ಶುರುಮಾಡುತ್ತಿದ್ದರು. ಈ ಬಾರಿ ತಪ್ತಮುದ್ರಾಧಾರಣೆ ಮತ್ತೆ ಬಂದಿದೆ. ಆದ್ರೆ ಶಿರೂರು ಶ್ರೀ ನೆನಪು ಮಾತ್ರ.

ತಪ್ತ ಮುದ್ರಾಧಾರಣೆಯಂದು ಜನಜಂಗುಳಿಯಿಂದ ತುಂಬಿಕೊಳ್ಳುತ್ತಿದ್ದ ಶಿರೂರು ಮಠ ಈ ಬಾರಿ ತಣ್ಣಗಿದೆ. ಪೊಲೀಸರು ಮಠವನ್ನು ಸುಪರ್ಧಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶಿರೂರು ಶ್ರೀಗಳ ಭಕ್ತರು, ಅಭಿಮಾನಿಗಳಿಗೆ ಈ ದಿನ ಬಹಳ ಕಾಡಲಿದೆ.

ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢವಾಗಿ ಮೃತಪಟ್ಟು ಐದು ದಿನಗಳು ಕಳೆದಿದೆ. ಪ್ರಕರಣ ತನಿಖೆ ಇನ್ನೂ ತನಿಖೆ ಹಂತದಲ್ಲಿದೆ.

Comments

Leave a Reply

Your email address will not be published. Required fields are marked *