ಮೊನ್ನೆ ಸಿದ್ದರಾಮಯ್ಯ, ಇಂದು ಡಿಕೆ ಶಿವಕುಮಾರ್ – ಎಂಎಲ್‍ಎ, ಎಂಎಲ್‍ಸಿಗಳಿಗೆ ಡಿನ್ನರ್ ಪಾರ್ಟಿ

– ಬುಧವಾರ ಪರಮೇಶ್ವರಿಂದ ಔತಣಕೂಟ ಆಯೋಜನೆ

ಬೆಂಗಳೂರು: ಇತ್ತೀಚೆಗೆಷ್ಟೆ ಸಮನ್ವಯ ಸಮಿತಿ ಅಧ್ಯಕ್ಷ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಖಾಸಗಿ ಹೋಟೆಲ್‍ ನಲ್ಲಿ ಔತಣ ಕೂಟ ಆಯೋಜಿಸಿದ್ದರು. ಈಗ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಔತಣ ಕೂಟ ಆಯೋಜಿಸಿದ್ದಾರೆ.

ಇವತ್ತು ಬೆಂಗಳೂರಿನ ಖಾಸಗಿ ಹೋಟೆಲ್‍ ನಲ್ಲಿ ತಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಎಂಎಲ್‍ಸಿಗಳು ಸೇರಿದಂತೆ ನಾಯಕರನ್ನೆಲ್ಲಾ ರಾತ್ರಿ ಊಟಕ್ಕೆ ಕರೆದಿದ್ದಾರೆ. ಬುಧವಾರ ಉಪ ಮುಖ್ಯಮಂತ್ರಿ ಪರಮೇಶ್ವರ್ ರಾತ್ರಿ ಊಟ ಆಯೋಜಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಅಧಿಕಾರವಧಿ ನಾಳೆ ಕೊನೆಯಾಗಲಿದ್ದು, ನಿಯೋಜಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಆಯೋಜಿಸಿದ್ದ ರಾತ್ರಿ ಊಟಕ್ಕೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಹೆಚ್‍ಕೆ ಪಾಟೀಲ್, ರೋಷನ್ ಬೇಗ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರು ಗೈರಾಗಿದ್ದರು.

Comments

Leave a Reply

Your email address will not be published. Required fields are marked *