ಚಾಮರಾಜನಗರ: ಜಿಲ್ಲೆಯಲ್ಲಿ ಹುಲಿ ದಾಳಿಯ ಭೀತಿ ಎದುರಾಗಿದೆ. ಈ ಹಿನ್ನೆಲೆ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಸೆಕ್ಯುರಿಟಿ ವ್ಯವಸ್ಥೆ ಮಾಡುತ್ತಿದೆ.
ಉಳುಮೆ ಮಾಡಲು, ಫಸಲು ಕೊಯ್ಲು ಮಾಡಲು, ಜಮೀನುಗಳಲ್ಲಿ ಕೆಲಸ ಮಾಡಲು ರೈತರಿಗೆ ಅರಣ್ಯ ಇಲಾಖೆಯಿಂದ ಸೆಕ್ಯುರಿಟಿ ಕೊಡಲಾಗಿದೆ. ಚಾಮರಾಜನಗರ ತಾಲೂಕು ಕಲ್ಪುರ ಸುತ್ತಮುತ್ತ ಭಾರಿ ಗಾತ್ರದ ಹುಲಿ ಕಾಣಿಸಿಕೊಂಡಿತ್ತು. ಈಗಾಗಲೇ ಎರಡು ಹಸುಗಳನ್ನು ಬಲಿ ಪಡೆದಿತ್ತು.
ಜಮೀನುಗಳಿಗೆ ಹೋಗಲು ರೈತರು, ಕೃಷಿ ಕಾರ್ಮಿಕರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉಳುಮೆ ಮಾಡಲು, ಬೆಳೆ ಕೊಯ್ಲು ಮಾಡಲು ರೈತರಿಗೆ ಅರಣ್ಯ ಸಿಬ್ಬಂದಿ ಕಾವಲು ಮಾಡ್ತಿದ್ದಾರೆ. ಅರಣ್ಯ ಸಿಬ್ಬಂದಿಯ ಕಾವಲಿನಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ.
