ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರ ಬಂಧನ

ವಿಜಯಪುರ: ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ವಿಜಯಪುರದ ಇಂಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಎಂಬವರಿಗೆ ಮಹಿಳೆ ಹಾಗೂ ಆಕೆಯ ತಂಡ ವಂಚಿಸಿತ್ತು. ಬೆಳಗಾವಿ ಮೂಲದ ಮಹಿಳೆ, ಇಂಡಿಯ ವಿಠ್ಠಲ ವಡ್ಡರ, ಮುರುಗೇಶ ಉಳ್ಳಾಗಡ್ಡಿ ಬಂಧನವಾಗಿದ್ದು, ಇನ್ನೋರ್ವ ಆರೋಪಿ ಲಿಂಗರಾಜ ಪರಾರಿ ಆಗಿದ್ದಾನೆ. ಡಿಸೆಂಬರ್ 18ರಂದು ಈ ತಂಡ ಉದ್ಯಮಿಯ ಸುಲಿಗೆ ಮಾಡಿತ್ತು.

ಫೇಸ್‍ಬುಕ್ ನಲ್ಲಿ ಸ್ನೇಹ ಬೆಳೆಸಿ, ಉದ್ಯಮಿಯ ನಂಬರ್ ಪಡೆದು ಹನಿಟ್ರ್ಯಾಪ್ ಮಾಡಿದ್ದರು. ಬಳಿಕ ಇಂಡಿಯಲ್ಲಿದ್ದ ತನ್ನ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆಸಿ ಆರೋಪಿಗಳು ಖೆಡ್ಡಾಗೆ ತೋಡಿದ್ದರು. ಮಹಿಳೆಯ ಭೇಟಿಗೆ ಹೋಗಿದ್ದ ಉದ್ಯಮಿಯನ್ನು ಆರೋಪಿಗಳು ಆಕೆ ಜೊತೆಗಿದ್ದಾಗ ದಾಳಿ ನಡೆಸಿ ಧಮ್ಕಿ ಹಾಕಿದ್ದಾರೆ.

ಬಳಿಕ ನಾವು ಮಾಧ್ಯಮದವರು ನಿನ್ನ ವಿಡಿಯೋ ಪ್ರಸಾರ ಮಾಡುತ್ತೇವೆ ಎಂದು ಹೆದರಿಸಿ 24 ಸಾವಿರ ನಗದು, ಚಿನ್ನದ ಚೈನ್ ಹಾಗೂ ಚಿನ್ನದ ಕಡಗ ಕಿತ್ತುಕೊಂಡು ಪರಾರಿಯಾಗಿದ್ದರು. ಉದ್ಯಮಿ ಸುನೀಲ್ ಈ ಕುರಿತು ಡಿಸೆಂಬರ್ 22 ರಂದು ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *