ಮೂರು ದಿನ ಬಟ್ಟೆ ಅಂಗಡಿಗಳು ಕ್ಲೋಸ್

– ಕಷ್ಟದಲ್ಲಿ ದಿನಗೂಲಿ ನೌಕರರು

ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಹಂತ ಹಂತವಾಗಿ ಎಲ್ಲ ಉದ್ಯಮಗಳು ಬಂದ್ ಆಗುತ್ತಿದೆ. ಇದೀಗ ಬಟ್ಟೆ ಅಂಗಡಿಗಳು ಬಂದ್ ಆಗಿವೆ.

ಭಾನುವಾರದಿಂದ ಮೂರು ದಿನಗಳ ಕಾಲ ಬಟ್ಟೆ ವ್ಯಾಪಾರಿಗಳು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಿದ್ದು, ಅದರ ಎಫೆಕ್ಟ್ ಇಂದಿನಿಂದಲೇ ಶುರುವಾಗಿದೆ. ಬಟ್ಟೆ ವ್ಯಾಪಾರಕ್ಕೆ ಫೇಮಸ್ ಆಗಿದ್ದ ನಗರದ ಚಿಕ್ಕಪೇಟೆಯಲ್ಲಿ ಇಂದಿನಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಚಿಕ್ಕಪೇಟೆ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಬಟ್ಟೆ ಮಳಿಗೆಗಳು ಈಗಾಗಲೇ ಬಾಗಿಲು ಮುಚ್ಚಿವೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದು, ಬಹುತೇಕ ಜನರು ಜನತಾ ಕರ್ಫ್ಯೂ ವನ್ನು ಸ್ವಾಗತಿಸಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿದೆ. ಈ ಅಂಗಡಿಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಜನರಿಗೆ ಮೂರು ದಿನಗಳ ಬಟ್ಟೆ ವ್ಯವಹಾರ ಬಂದ್ ಆಗಿರುವುದು ತುಂಬಾ ತೊಂದರೆಯಾಗಿದೆ.

ದಿನ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರು ದಿನ ರಜೆ ನೀಡಿದರೆ ನಮ್ಮ ಕುಟುಂಬ ನಿರ್ವವಣೆ ಕಷ್ಟವಾಗಲಿದೆ ಎಂದು ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡೋ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು. ಸದ್ಯ ಮೂರು ದಿನಗಳ ಮಟ್ಟಿಗೆ ಮಾತ್ರ ಬಟ್ಟೆ ವ್ಯಾಪಾರ ಬಂದ್ ಆಗಿದ್ದು, ಕೊರೊನಾ ವೈರಸ್ ಮುಂದಿನ ಹಂತ ನೋಡಿಕೊಂಡು ಬಟ್ಟೆ ವ್ಯಾಪಾರ ನಿರ್ಧಾರವಾಗಲಿದೆ.

Comments

Leave a Reply

Your email address will not be published. Required fields are marked *