`ಥರ್ಡ್ ಕ್ಲಾಸ್’ ಚಿತ್ರದ ನಾಯಕ ನಟ ಆಸ್ಪತ್ರೆಗೆ ದಾಖಲು!

ಬೆಂಗಳೂರು: `ಥರ್ಡ್ ಕ್ಲಾಸ್’ ಚಿತ್ರದ ಶೂಟಿಂಗ್ ವೇಳೆ ಕಣ್ಣಿಗೆ ಮಣ್ಣು ಬಿದ್ದು ನಾಯಕ ನಟ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಜಗದೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಟರಾಗಿದ್ದು, ಇವರೊಂದಿಗೆ ಎಂಟು ಜನರ ಕಣ್ಣಿಗೂ ಗಾಯಗಳಾಗಿವೆ.

ನಡೆದಿದ್ದೇನು?: ಘಾಟಿ ಸುಬ್ರಹ್ಮಣ್ಯದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟಿಂಗ್ ವೇಳೆ ನಾಯಕ ನಟ ಕಣ್ಣಿಗೆ ಮಣ್ಣು ಬಿದ್ದಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ನಟ ಕಣ್ಣು ತೆರೆಯಲಾರದೆ ನೋವಿನಲ್ಲೇ ಒದ್ದಾಡುತ್ತಿದ್ದರು. ಇವರೊಂದಿಗೆ ಫೈಟ್ ನಲ್ಲಿದ್ದ 8 ಮಂದಿಯ ಕಣ್ಣಿಗೂ ಸ್ವಲ್ಪ ಮಟ್ಟಿನ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಜಗದೀಶ್ ಸದ್ಯ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಥರ್ಡ್ ಕ್ಲಾಸ್ ಸಿನಿಮಾಕ್ಕೆ ಅಶೋಕ್ ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರಿಂದ ಕ್ಲಾಪ್ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *