ಮಾರುತಿ ಕಂಪನಿ ಕಾರುಗಳೇ ಕಳ್ಳರ ಟಾರ್ಗೆಟ್

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸರು ನಾಲ್ಕು ಜನ ಅಂತರ್ ರಾಜ್ಯ ಕಾರು ಕಳ್ಳರನ್ನು ಬಂಧಿಸಿದ್ದು, ಬಂಧಿತರಿಂದ 30 ಲಕ್ಷ ರೂ. ಬೆಲೆಯ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಎಲ್ಲವೂ ಮಾರುತಿ ಸುಜುಕಿ  ಕಂಪನಿಗೆ ಸೇರಿದ ಕಾರುಗಳಾಗಿವೆ.

ತಮಿಳುನಾಡು ಮೂಲದ ಸದ್ದಾಂ ಹುಸೇನ್, ಮಾರಿ ಮುತ್ತು, ನಾಹೂರ್ ಮೀರಾ, ಹರಿಕೃಷ್ಣ ಬಂಧಿತ ಆರೋಪಿಗಳು. ಮಾರುತಿ ಕಂಪನಿ ಕಾರುಗಳನ್ನೇ ಕದಿಯುತ್ತಿದ್ದ ಈ ಕಳ್ಳರು, ಗಾಜು ಒಡೆದು ಕಾರು ತೆಗೆದುಕೊಂಡು  ಪರಾರಿ ಆಗುತ್ತಿದ್ದರು. ಮಾರುತಿ ಬ್ರೀಜಾ, ಎರ್ಟಿಗಾ ಮತ್ತು ಸ್ವಿಫ್ಟ್ ಡಿಸೈರ್ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು.

ಮೂರು ತಿಂಗಳ ಹಿಂದೆಯಷ್ಟೇ ತಂದಿದ್ದ ಹೊಸ ಕಾರನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಚಂದನ ಲೇಔಟಿನಲ್ಲಿ ಕದ್ದು ಎಸ್ಕೇಪ್ ಆಗಿದ್ದರು. ಹೊಸ ಕಾರು ಕಳ್ಳತನವಾಗಿದೆ ಎಂದು ಮಾಲೀಕ ಚಂದ್ರೇಗೌಡ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ತಮಿಳುನಾಡಿನ ತಿರುಚ್ಚಿಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ನಾಲ್ಕು ಜನ ಕಳ್ಳರು ಈ ಮೊದಲು ಹುಳಿಮಾವು, ಬೊಮ್ಮನಹಳ್ಳಿ, ಸೂರ್ಯನಗರ, ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ಕಾರು ಕದ್ದಿದ್ದರು. ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ.

Comments

Leave a Reply

Your email address will not be published. Required fields are marked *