ಕಾರಿನ ಟಯರ್ ಪಂಚರ್ ಅಂತಾ ಹೇಳಿ 15 ಲಕ್ಷ ರೂ. ಕದ್ರು

ರಾಮನಗರ: ಖತರ್ನಾಕ್ ಕಳ್ಳರು ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 15 ಲಕ್ಷ ರೂ. ಹಣ ಕಳವು ಮಾಡಿರುವ ಘಟನೆ ರಾಮನಗರದ ಸ್ಪೂರ್ತಿ ಭವನದ ಬಳಿ ನಡೆದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಘುನಾಥರೆಡ್ಡಿ ಹಣ ಕಳೆದುಕೊಂಡ ವ್ಯಕ್ತಿ. ಜಮೀನಿನ ವ್ಯಾಪಾರಕ್ಕೆಂದು ರಾಮನಗರಕ್ಕೆ ಬಂದಿದ್ದ ವೇಳೆ ಈ ಕಳ್ಳತನ ನಡೆದಿದೆ. ನಗರದ ಸ್ಪೂರ್ತಿ ಭವನದ ಸಮೀಪದಲ್ಲಿನ ಸಬ್ ರಿಜಿಸ್ಟರ್ ಆಫೀಸ್ ಬಳಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನ ಬಳಿ ಬಂದ ಇಬ್ಬರು ವ್ಯಕ್ತಿಗಳು ಕಾರ್ ನ ಟಯರ್ ಪಂಚರ್ ಆಗಿದೆ ಅಂತಾ ಹೇಳಿದ್ದಾರೆ. ಕಳ್ಳರ ಮಾತನ್ನು ನಂಬಿದ ರಘುನಾಥ್ ಟಯರ್ ನೋಡುತ್ತಾ ನಿಂತಾಗ ಕಾರಿನಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಕೆಲ ನಿಮಿಷಗಳ ಬಳಿಕ ಕಾರಿನಲ್ಲಿದ್ದ ಹಣ ಕಾಣದೇ ಇರುವುದು ಗಮನಕ್ಕೆ ಬಂದಾಗ ರಘುನಾಥ್ ಅವರಿಗೆ ಕಳ್ಳತನದ ಅರಿವಾಗಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *