ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್

ಮುಂಬೈ: ಯಾರು ಚಿಂತೆ ಮಾಡುವ ಅಗತ್ಯವಿಲ್ಲ, ಎಲ್ಲವೂ ಚೆನ್ನಾಗಿದೆ. ಸ್ವಲ್ಪ ತಾಳ್ಮೆಯ ಅವಶ್ಯಕತೆಯಿದೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಟ್ವಿಟ್ಟರ್ ಮೂಲಕ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಮೊದಲು ಟ್ವೀಟ್ ಮಾಡಿದ್ದ ಅಜಿತ್ ಪವಾರ್, ನಾನು ಎನ್‍ಸಿಪಿಯಲ್ಲಿದ್ದೇನೆ. ಯಾವಾಗಲೂ ಇದೇ ಪಕ್ಷದಲ್ಲಿಯೇ ಇರುತ್ತೇನೆ ಮತ್ತು ಶರದ್ ಪವಾರ್ ನಮ್ಮ ನಾಯಕರು. ನಮ್ಮ ಬಿಜೆಪಿ-ಎನ್‍ಸಿಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಮುಂದಿನ ಐದು ವರ್ಷ ಸ್ಥಿರ ಸರ್ಕಾರ ನೀಡಲಿದೆ. ರಾಜ್ಯದ ಅಭಿವೃದ್ಧಿ ಮತ್ತು ಜನಹಿತಕ್ಕಾಗಿ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

ಇತ್ತ ಅಜಿತ್ ಪವಾರ್ ನಡೆಯನ್ನು ಖಂಡಿಸಿರುವ ಶರದ್ ಪವಾರ್, ಬಿಜೆಪಿಯೊಂದಿಗೆ ನಮ್ಮ ಮೈತ್ರಿ ಸಾಧ್ಯವಿಲ್ಲ. ನಮ್ಮ ಶಾಸಕರೆಲ್ಲರೂ ಒಗ್ಗಾಟ್ಟಿದ್ದು, ಬಿಜೆಪಿ ಹೇಗೆ ಬಹುಮತ ಸಾಬೀತು ಮಾಡುತ್ತೇವೆ ಎಂದು ಕಾದು ನೋಡುತ್ತೇವೆ. ಕೊನೆಗೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

Comments

Leave a Reply

Your email address will not be published. Required fields are marked *