ಕರಾವಳಿಯಲ್ಲಿ 2 ಭಯೋತ್ಪಾದಕ ಫ್ಯಾಕ್ಟರಿ ಇವೆ, ಸ್ವಲ್ಪ ಸಮಯ ಸಿಕ್ಕಿದ್ರೂ ಮಟ್ಟ ಹಾಕ್ತಿದ್ದೆ- ರಾಮಲಿಂಗಾರೆಡ್ಡಿ

ಕಲಬುರಗಿ: ಕರಾವಳಿಯಲ್ಲಿ ಎರಡು ಭಯೋತ್ಪಾದಕ ಫ್ಯಾಕ್ಟರಿಗಳಿವೆ. ಸಮಯ ಸಿಕ್ಕಿದ್ರೆ ಅವುಗಳನ್ನು ಮಟ್ಟ ಹಾಕುತ್ತಿದ್ದೆ ಅಂತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತಾಡಿದ ಅವರು, ಸತ್ತ ಮೇಲೆ ಸತ್ತವರ ಮನೆಗೆ ಹೋಗಿ ಮರಣೋತ್ತರ ಸದಸ್ಯತ್ವ ಕೊಡೋದೇ ಬಿಜೆಪಿಯ ಕೆಲಸ. ರಾಜ್ಯದಲ್ಲಿ 23 ಹಿಂದೂಗಳ ಕೊಲೆ ಆಗಿದೆ ಅಂತ ಬಿಜೆಪಿ ಹೇಳ್ತಿದೆ. ಆದ್ರೆ 9 ಮಂದಿ ಹಿಂದೂಗಳು ಮಾತ್ರ ಕೋಮು ಜಗಳದಲ್ಲಿ ಕೊಲೆ ಆಗಿದ್ದಾರೆ. ಬಿಜೆಪಿವರು ಯಾರಾದ್ರೂ ಸಾಯೋದನ್ನೇ ಕಾಯ್ತಾ ಇರ್ತಾರೆ. ಸತ್ತರೆ ಅವರ ಮನೆಗೆ ಹೋಗಿ ಮರಣೋತ್ತರ ಸದಸ್ಯತ್ವ ನೋಂದಣಿ ಮಾಡಿಕೊಳ್ತಾರೆ ಅಂತ ಲೇವಡಿ ಮಾಡಿದ್ರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಭಯೋತ್ಪಾದಕರ ಫ್ಯಾಕ್ಟರಿಗಳಿದ್ದು, ಇನ್ನು ಸ್ವಲ್ಪ ಸಮಯ ಸಿಕ್ಕಿದ್ರೆ ಅವರ ಮೇಲೆ ಸಂಪೂರ್ಣ ಕ್ರಮ ಕೈಗೊಳ್ಳುತ್ತಿದೆ ಅಂತಾ ಹೇಳಿದ್ರು.

Comments

Leave a Reply

Your email address will not be published. Required fields are marked *