ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದ ರಾಜ್ಯ ಸಮೃದ್ಧಿಯಾಗಿದೆ-ಡಿಕೆಶಿ

ಮೈಸೂರು: ರಾಜ್ಯದ ಜ್ಯಾತ್ಯಾತೀತ ಸರ್ಕಾರವನ್ನು ರಚನೆ ಮಾಡಲು ಎರಡು ಪಕ್ಷಗಳು ಒಂದಾಗಿದ್ದು, ಉತ್ತಮ ಆಡಳಿತ ನೀಡಲು ಮುಂದಾಗಿದ್ದು, ಇದಕ್ಕೆ ವರುಣ ದೇವರು ಕರುಣೆ ತೋರಿದ್ದು ಉತ್ತಮ ಮಳೆಯಾಗಿ ರಾಜ್ಯ ಸಂವೃದ್ಧಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಚಾಮುಂಡಿ ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಎರಡು ಜಲಾಶಯ ಭರ್ತಿಯಿಂದ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ತಮಿಳುನಾಡಿಗೆ ಈ ಬಾರಿ ನಾವು ನೀಡಬೇಕಿರುವ ನೀರಿನ ಪಾಲು ನೀಡಿದ್ದೇವೆ. ಜಲಾಶಯದಿಂದ ವಿದ್ಯುತ್ ಉತ್ಪಾದನೆಯೂ ಹೆಚ್ಚಿದೆ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ. ನಾವು ಶುದ್ಧ ಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ರಾಜ್ಯ ಸಮೃದ್ಧಿಯಾಗಿದೆ ಎಂದರು.

ಇದೇ ವೇಳೆ ಇಂದು ತಾವು ಎರಡನೇ ಬಾರಿಗೆ ಅಯ್ಯಪ್ಪ ಮಾಲೆ ಹಾಕುತ್ತಿರುವುದಾಗಿ ತಿಳಿಸಿದ ಸಚಿವರು, ಈ ಹಿಂದೆ ಮಾಲೆ ಹಾಕುವ ಹರಕೆ ಕಟ್ಟಿಕೊಂಡಿದ್ದೆ. ಅದರಂತೆ ಇವತ್ತು ಸಂಜೆ ಅಯ್ಯಪ್ಪ ಮಾಲೆ ಹಾಕುತ್ತೇನೆ ಎಂದರು.

ಸಿಎಂ ಎಚ್‍ಡಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿಂದತೆ ಸಚಿವರಾದ ಸಾರಾ ಮಹೇಶ್, ಜಿಡಿ ದೇವೇಗೌಡ ಅವರು ಸಾಥ್ ನೀಡಿದ್ದರು. ಚಾಮುಂಡೇಶ್ವರಿಯ ದರ್ಶನದ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿರುವ ಕಾರಣ ಬಾಗಿನ ಆರ್ಪಿಸಲು ತೆರಳಿದರು.

Comments

Leave a Reply

Your email address will not be published. Required fields are marked *