ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

ಕಲಬುರಗಿ: ತಂದೆ ಮಾಡಿದ ಸಾಲಕ್ಕಾಗಿ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆರೋಪಿಗಳನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

ಅಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಧನ್ ರಾಜ್ ಮತ್ತು ಸೀತಾರಾಂ ಬಂಧಿತ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇಟ್ಟಿಗೆ ವ್ಯಾಪಾರಿಯೊಬ್ಬರ ಬಳಿ ಕಾಶೀನಾಥ್ ಎಂಬಾತ ಕೆಲಸಕ್ಕೆ ಬರುತ್ತೇನೆ ಎಂದು 1 ಲಕ್ಷ ರೂಪಾಯಿ ಹಣ ಪಡೆದಿದನು.

ಕೆಲಸಕ್ಕೂ ಬಾರದೇ ಹಣವನ್ನು ವಾಪಸ್ ನೀಡದ ಹಿನ್ನಲೆಯಲ್ಲಿ ಮಧ್ಯವರ್ತಿಗಳಾದ ಧನ್ ರಾಜ್ ಮತ್ತು ಸೀತಾರಾಂ ಇಬ್ಬರೂ ಸೇರಿ ಕಾಶೀನಾಥನ ಮಗ ಕುಮಾರ್ ಎಂಬ ಬಾಲಕನನ್ನು ನವೆಂಬರ್ 12 ರಂದು ಕಿಡ್ನಾಪ್ ಮಾಡಿದರು. ನಂತರ ಮಹಾರಾಷ್ಟ್ರಕ್ಕೆ ಕರೆದೊಯ್ದು ಹಣ ತಗೊಂಡು ಬಾ ಇಲ್ಲದಿದ್ದರೆ ಮಗನನ್ನು ಮುಗಿಸ್ತೇವೆ ಎಂದು ಫೋನ್ ಮಾಡಿದ್ದಾರೆ.

ಈ ವೇಳೆ ಪ್ರಕರಣ ದಾಖಲಿಸಿಕೊಂಡ ನಿಂಬರ್ಗಾ ಪೊಲೀಸರು ಹಣ ನೀಡುವ ವೇಳೆಯಲ್ಲಿಯೇ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ಕಾಪಾಡಿದ್ದು, ಆರೋಪಿಗಳಿಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *