ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟು ಶೂಟಿಂಗ್ ಮುಂದುವರೆಸಿದ್ದಾರಂತೆ ನಿರ್ದೇಶಕರು. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರು ಮತ್ತು ನಿರ್ಮಾಪಕರು ಆಗಿರುವ ಆರೂರು ಜಗದೀಶ್, ಇಂದು ಕೂಡ ಚಿತ್ರೀಕರಣವನ್ನು ಮುಂದುವರೆಸಿದ್ದಾರಂತೆ. ಈ ನಡುವೆ ಅನಿರುದ್ಧ ನಿರ್ವಹಿಸುತ್ತಿದ್ದ ಪಾತ್ರಕ್ಕಾಗಿ ಹೊಸ ಕಲಾವಿದರನ್ನೂ ಹುಡುಕುತ್ತಿದ್ದಾರಂತೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ ಧಾರಾವಾಹಿ ನಡೆಯಲೇಬೇಕು. ಈ ಧಾರಾವಾಹಿ ನಂಬಿಕೊಂಡು ನನ್ನನ್ನೂ ಸೇರಿದಂತೆ ಹಲವರು ಇದ್ದಾರೆ. ಹಾಗಾಗಿ ಚಿತ್ರೀಕರಣ ಮುಂದುವರೆಸಲೇಬೇಕಿದೆ’ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅನಿರುದ್ಧ ಅವರು ವಾಪಸ್ಸು ಬರದೇ ಇದ್ದರೂ, ಯಾರೇ ಬಂದರೂ ಶೂಟಿಂಗ್ ನಡೆಯಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

ನಿನ್ನೆ ನಡೆಯುತ್ತಿದ್ದ ಶೂಟಿಂಗ್ ನಲ್ಲಿ ಅನಿರುದ್ಧ ಅವರೇ ಬಿಟ್ಟು ಹೋಗಿರುವುದರಿಂದ, ಅವರನ್ನು ಧಾರಾವಾಹಿ ತಂಡ ಮತ್ತೆ ಕರೆಯುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಆರೂರು ಜಗದೀಶ್ ಮತ್ತು ಅನಿರುದ್ಧ ಕೂಡಿಸಿಕೊಂಡು ವಾಹಿನಿಯು ಮಾತನಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾಹಿನಿಯ ಮಧ್ಯಸ್ಥಿಕೆಯಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆಯಾ ಅನ್ನುವ ಕುತೂಹಲ ಕೂಡ ಮೂಡಿದೆ. ಈಗಾಗಲೇ ಹಲವಾರು ಬಾರಿ ಇದೇ ರೀತಿಯಲ್ಲೇ ಮನಸ್ತಾಪ ಆಗಿರುವುದರಿಂದ ಧಾರಾವಾಹಿ ನಿರ್ಮಾಪಕರು ಇದಕ್ಕೆ ಒಪ್ಪುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಇಂದು ಸಂಧಾನ ನಡೆಯುವ ಸಾಧ್ಯತೆಯಿದ್ದು, ಧಾರಾವಾಹಿ ತಂಡದೊಂದಿಗೆ ಮಾತನಾಡುವುದಾಗಿ ಈಗಾಗಲೇ ಅನಿರುದ್ಧ ಹೇಳಿಕೊಂಡಿದ್ದಾರೆ. ಒಂದು ವೇಳೆ ಧಾರಾವಾಹಿಯಿಂದ ಕೈ ಬಿಟ್ಟರೆ, ಪತ್ರಿಕಾಗೋಷ್ಠಿ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಈ ಕುರಿತು ಮಾತನಾಡಲು ನಿರ್ಮಾಪಕ ಕಂ ನಿರ್ದೇಶಕ ಆರೂರು ಜಗದೀಶ್ ನಿರಾಕರಿಸಿದ್ದಾರೆ. ಅನಿರುದ್ಧ ಅವರ ನಡೆ ನೋಡಿಕೊಂಡು ಪ್ರತಿಕ್ರಿಯೆ ನೀಡಲಿದ್ದೇನೆ ಎಂದೂ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *