ನಿಶ್ಚಿತಾರ್ಥ ಮಾಡ್ಕೊಂಡು ಮದುವೆಗೆ ಸಜ್ಜಾದ ವರ ಮಂಟಪಕ್ಕೆ ಬರಲೇ ಇಲ್ಲ!

ತುಮಕೂರು: ತಾಳಿ ಕಟ್ಟುವ ವೇಳೆಯಲ್ಲೇ ವರ ಮಂಟಪದಿಂದ ನಾಪತ್ತೆಯಾದ ಘಟನೆ ತುಮಕೂರು ಜಿಲ್ಲೆಯ ಯಡಿಯೂರಿನಲ್ಲಿ ನಡೆದಿದೆ.

ಕಲ್ಲೇಗೌಡನ ದೊಡ್ಡಿ ಗ್ರಾಮದ ಶಿವಕುಮಾರ್ ಮದುವೆಗೆ ಒಪ್ಪದೆ ನಾಪತ್ತೆಯಾದ ವರನಾಗಿದ್ದಾನೆ. ಈತನಿಗೆ ತಾಲೂಕಿನ ಬಿಳಿದೇವಾಲಯದ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಶನಿವಾರ ಮತ್ತು ಇಂದು ಯಡಿಯೂರಿನ ಹನುಮ್ಮ ತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ನಿನ್ನೆ ರಾತ್ರಿ ಶಾಸ್ತ್ರ, ಇಂದು ಮಹೂರ್ತ ನಡೆಯಬೇಕಿತ್ತು. ಹೀಗಾಗಿ ಸಂಬಂಧಿಕರೆಲ್ಲರೂ ಬಂದಿದ್ದರು. ಆದ್ರೆ ವರ ಶಿವಕುಮಾರ್ ಮಾತ್ರ ಕೊನೆ ಘಳಿಗೆವರೆಗೂ ಮದುವೆ ಮಂಟಪಕ್ಕೆ ಬರದೇ ನಾಪತ್ತೆಯಾಗಿದ್ದಾನೆ. ಇದರಿಂದ ಮದುವೆ ಇದೀಗ ಅರ್ಧಕ್ಕೆ ನಿಂತಿದೆ.

 

ಮದುವೆ ಸಮಾರಂಭದಲ್ಲಿ ಸಾವಿರಾರು ಜನರಿಗೆ ಮಾಡಿಸಿದ್ದ ಅಡುಗೆ ಸಂಪೂರ್ಣ ಹಾಳಾಗಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ಬಂದಿದ್ದ ಸಂಬಂಧಿಕರು ವಿಧಿಯಿಲ್ಲದೆ ವಾಪಸ್ ಮನೆಗೆ ನಡೆದಿದ್ದಾರೆ.

Comments

Leave a Reply

Your email address will not be published. Required fields are marked *