ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ: ದೀಪಿಕಾ ಪಡುಕೋಣೆ

ಮುಂಬೈ: ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ ಎಂದು ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್ ನ ಪವರ್‌ಫುಲ್ ಕಪಾಲ್. ಇವರಿಬ್ಬರು ಆಗಾಗ್ಗೆ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದು, ಕಾಲೆಳೆಯುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ದೀಪಿಕಾ ಸಂದರ್ಶನವೊಂದರಲ್ಲಿ ರೀಲೇಷನ್‍ಶಿಪ್‍ನಲ್ಲಿ ದೈಹಿಕ ಅನ್ಯೋನ್ಯತೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು, ದೈಹಿಕ ಅನ್ಯೋನ್ಯತೆ ಮುಖ್ಯ. ಆದರೆ ಅದಕ್ಕಿಂತ ಇಬ್ಬರ ನಡುವೆ ನಂಬಿಕೆ ಮತ್ತು ಸ್ನೇಹ ಇರುವುದು ತುಂಬಾ ಮುಖ್ಯ. ಇವು ಶಾರೀರಿಕ ಅನ್ಯೋನ್ಯತೆಗಿಂತ ಬಹಳ ಮುಖ್ಯವಾದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಆರೋಪ – 3ನೇ ದಿನಕ್ಕೆ ಕಾಲಿಟ್ಟ ನಟ ದಿಲೀಪ್ ವಿಚಾರಣೆ!

ನಂತರ ಅವರು, ದೈಹಿಕ ಅನ್ಯೋನ್ಯತೆ ರೀಲೇಷನ್‍ಶಿಪ್‍ನಲ್ಲಿ ಪ್ರಮುಖ ಭಾಗವಾಗಿದೆ ಅದನ್ನು ನಾನು ಒಪ್ಪುತ್ತೇನೆ. ಆದರೆ ರೀಲೇಷನ್‍ಶಿಪ್‍ಗೆ ಅದೇ ತುಂಬಾ ಮುಖ್ಯ ಎಂದು ನಾನು ಎಂದೂ ಒಪ್ಪುವುದಿಲ್ಲ ಎಂದಿದ್ದಾರೆ. ಇದೇ ವೇಳೆ ರಣವೀರ್ ಹಾಡುವುದರ ಕುರಿತು ಮಾತನಾಡಿದ್ದು, ಅವರು ಹಾಡುತ್ತಾರೆ. ಆದರೆ ಅಷ್ಟೊಂದು ಚೆನ್ನಾಗಿ ಹಾಡುವುದಿಲ್ಲ. ರಣವೀರ್ ರಾಪಿಂಗ್ ಕೌಶಲ್ಯ ಅದ್ಭುತವಾಗಿದೆ. ಆದರೆ ಅವರ ಹಾಡುಗಾರಿಕೆ ನನಗೆ ಅಷ್ಟೊಂದು ಇಷ್ಟವಾಗುವುದಿಲ್ಲ. ಅದಕ್ಕೆ ನಾನು ಅವರಿಗೆ 10 ರಲ್ಲಿ 2 ಅಂಕ ಕೊಡುತ್ತೇನೆ ಎಂದು ಪತಿಯ ಕಾಲೆಳೆದಿದ್ದಾರೆ.

ದೀಪಿಕಾ ‘ಪಠಾಣ್’ ಸಿನಿಮಾ ಕುರಿತು ಮಾತನಾಡಿದ್ದು, ನಾನು ಮತ್ತೆ ಶಾರೂಖ್ ಖಾನ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆ ತುಂಬಾ ಚೆನ್ನಾಗಿತ್ತು. ಅದಕ್ಕೆ ಈ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದೀಪಿಕಾ, ಶಾರೂಖ್ ಜೊತೆ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‍ಪ್ರೆಸ್ ಸಿನಿಮಾಗಳಲ್ಲಿ ನಟಿಸಿದ್ದು, ಸೂಪರ್ ಜೋಡಿ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ತುಮಕೂರು ಸಿಕ್ಕಿದ್ರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ

ಪ್ರಸುತ್ತ ದೀಪಿಕಾ ನಟನೆಯ ‘ಗೆಹ್ರೈಯಾನ್’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದು, ಈ ಸಿನಿಮಾ ಓಟಿಟಿಯಲ್ಲಿ ಫೆ.11 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಾತ್ರ ಭಿನ್ನವಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾಗೆ ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಧೈರ್ಯ ಕರ್ವಾ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *