ರೂಪದರ್ಶಿಗೆ ವಂಚನೆ- ಕಿರುತೆರೆ ನಟ ಕಿರಣ್‍ರಾಜ್ ಅರೆಸ್ಟ್

ಬೆಂಗಳೂರು: ದೈಹಿಕ ಸಂಪರ್ಕ ನಡೆಸಿ ಮದುವೆಯಾಗದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರೂಪದರ್ಶಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಕಿರುತೆರೆ ನಟ ಕಿರಣ್ ರಾಜ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಸುಮಯಾ(ಹೆಸರು ಬದಲಾಯಿಸಲಾಗಿದೆ) ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದು ಕಿರಣ್ ವಿರುದ್ಧ ದೂರು ದಾಖಲಿಸಿದ್ದರು.

ದೂರಿನಲ್ಲಿ ಏನಿದೆ?
ನಾನು ಮತ್ತು ಕಿರಣ್ ರಾಜ್ ಲಿವಿಂಗ್ ರಿಲೇಶನ್ ಶಿಪ್ ಹೊಂದಿದ್ದೆವು. ಮಾರ್ಚ್ 29 ರಂದು ಕಿರಣ್ ನನ್ನ ಮೇಲೆ ಕಾರ್ ನಲ್ಲಿ ಹಲ್ಲೆ ಮಾಡಿದ್ದನು. ಅಲ್ಲದೇ ಮನೆ ಬಳಿಯ ಗ್ಯಾರೇಜ್ ನಲ್ಲಿ ನನ್ನನ್ನು ಕೂಡಿ ಹಾಕಿ ಅಲ್ಲೂ ಸಹ ಹಲ್ಲೆ ನಡೆಸಿದ್ದ. ನಂತರ ನಾನು ಕಿರಣ್ ನಿಂದ ತಪ್ಪಿಸಿಕೊಂಡು ಮುಂಬೈ ಗೆ ಹೋಗಿದ್ದೆ. ಬಳಿಕ ಮುಂಬೈನ ಓಶಿವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈ ವೇಳೆ ಹಲ್ಲೆ ಬೆಂಗಳೂರಿನಲ್ಲಿ ನಡೆದಿರುವ ಕಾರಣ ಅಲ್ಲೇ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದರು. ಹೀಗಾಗಿ ನಾನು ಇಲ್ಲಿ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಿರಣ್ ನನ್ನ ಜೊತೆ ದೈಹಿಕ ಸಂಪರ್ಕ ಹೊಂದಿ ಕೊನೆಗೆ ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ಸುಮಾಯಾ ದೂರಿನಲ್ಲಿ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *